ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಾರಂಭವಾದ ‘ಕ್ಯಾನ್ವಾಕ್’ ಜಾಗೃತಿ ನಡಿಗೆ, ಹಡ್ಸನ್ ವೃತ್ತ, ವಿಧಾನಸೌಧ, ಕೇಂದ್ರ ಅಂಚೆ ಕಚೇರಿ, ಇನ್ಫೆಂಟ್ರಿ ರಸ್ತೆ ಮೂಲಕ ಕಂಠೀರವ ಕ್ರೀಡಾಂಗಣದಲ್ಲಿ ಮುಕ್ತಾಯವಾಯಿತು. 5 ಕಿ.ಮೀ. ನಡಿಗೆಯಲ್ಲಿ ಚಲನಚಿತ್ರ ನಟರಾದ ಪ್ರೇಮ್, ಅಭಿಜಿತ್, ನಟಿ ಕಾರುಣ್ಯ ರಾಮ್, ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.