ಸೃಷ್ಟಿ ಅಭಿನಯ ಕಲಾವಿದರ ಕೇಂದ್ರದ ನಿರ್ದೇಶಕ ಎ.ವಿ. ಸತ್ಯನಾರಾಯಣ, ‘ನೃತ್ಯವು ಮನರಂಜನೆ ಮಾತ್ರವಾಗಿರದೆ, ಅಷ್ಟಾಂಗ ಸೇವೆಯಲ್ಲಿ ಒಂದಾಗಿದೆ. ನಮ್ಮ ಸಂಸ್ಕೃತಿಯಲ್ಲಿಯೇ ನೃತ್ಯ ಇದೆ. ಹೋಳಿ, ಗಣೇಶ ಹಬ್ಬ ವಿವಿಧ ಸಂದರ್ಭದಲ್ಲಿ ನೃತ್ಯ ಕಾಣಬಹುದಾಗಿದ್ದು, ಈ ಕಲಾ ಪ್ರಕಾರ ಜೀವನದ ಅವಿಭಾಜ್ಯ ಅಂಗವಾಗಿದೆ’ ಎಂದು ಹೇಳಿದರು.