ಬಿಡುಗಡೆಗೊಂಡು ಮನೆಗೆ ತೆರಳಿದ ರೋಗಿಗಳಿಗೆ ಜೆ.ಪಿ.ನಗರದ ಜಿವಿಜಿ ಇನ್ವಿವೊ ಆಸ್ಪತ್ರೆಯು ಸಸಿಗಳನ್ನು ವಿತರಿಸಿತು. ಕಮಲಾನಗರದ ರಾಷ್ಟ್ರಕವಿ ಕುವೆಂಪು ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದ ಅಬಕಾರಿ ಸಚಿವ ಕೆ.ಗೋಪಾಲಯ್ಯ, ‘ಪರಿಸರ ಕಾಳಜಿ ಪ್ರತಿಯೊಬ್ಬರಲ್ಲೂ ಮೂಡಬೇಕು. ವರ್ಷದ ಪ್ರತಿ ದಿನವೂ ಪರಿಸರ ದಿನವಾಗಬೇಕು’ ಎಂದರು.