ಪುತ್ತೂರು ರಮೇಶ ಭಟ್ ಹಾಗೂ ಎ.ಪಿ. ಪಾಠಕ್ ಅವರಿಂದ ತೆಂಕು ಬಡಗು ಶೈಲಿಯ ಗಾಯನ ನಡೆಯಿತು. ಇದಕ್ಕೂ ಮೊದಲು ಯಕ್ಷಗಾನ ಸಾಹಿತ್ಯದ ಆಳ, ವಿಸ್ತಾರ ಹಾಗೂ ವೈಶಿಷ್ಟ್ಯದ ಕುರಿತು ಪ್ರೊ.ಎಂ.ಎಲ್. ಸಾಮಗ, ಶ್ರೀಧರ ಡಿ.ಎಸ್., ಗಿಂಡಿಮನೆ ಮೃತ್ಯುಂಜಯ, ಆನಂದರಾಮ ಉಪಾಧ್ಯ, ರವಿ ಮಡೋಡಿ, ಮಹಾಬಲೇಶ್ವರ ಭಟ್ಟ ಇಟಗಿ, ಅಜಿತ್ ಕಾರಂತ ಹಾಗೂ ಅಶ್ವಿನಿ ಮಾತನಾಡಿದರು.