‘ಯಡಿಯೂರಿನಲ್ಲಿ ಸಮುದಾಯ ಭವನ ನಿರ್ಮಿಸಲು ₹ 5.50 ಕೋಟಿಯ ಟೆಂಡರ್ ನೀಡಲಾಗಿದ್ದು, ಎನ್.ಆರ್. ರಮೇಶ್ ಬೇನಾಮಿ ಹೆಸರಿನಲ್ಲಿ ಗುತ್ತಿಗೆ ನೀಡಿದ್ದಾರೆ. ಒಂದೇ ಕಾಮಗಾರಿಯನ್ನು ಮೂರು ಕಾಮಗಾರಿಗಳಾಗಿ ವಿಭಜಿಸಿ ಕಾನೂನು ವಿರುದ್ಧವಾಗಿ ಟೆಂಡರ್ ನೀಡಲಾಗಿದ್ದು, ಸತೀಶ್ ಈ ಟೆಂಡರ್ ಪಡೆದಿದ್ದಾರೆ. ಒಂದು ಕಾಮಗಾರಿಗೆ ಹಲವು ರೀತಿಯ ಲೆಕ್ಕ ಪರಿಶೋಧನೆಗಳಾಗಬೇಕು. ಆದರೆ, ಈ ಕಾಮಗಾರಿಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ’ ಎಂದೂ ಅವರು ಆರೋಪಿಸಿದರು.