<p><strong>ಯಲಹಂಕ: </strong>ಆವಲಹಳ್ಳಿ ಸಮೀಪದ ಪ್ರೆಸಿಡೆನ್ಸಿ ಶಾಲೆಯ ಬಳಿ ಶಾಲಾ ವಾಹನಗಳು, ಮಕ್ಕಳು ಹಾಗೂ ಪೋಷಕರು, ಓಡಾಡುತ್ತಿದ್ದ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಶುಕ್ರವಾರ ಏಕಾಏಕಿ ಬಂದ್ ಮಾಡಿದ ಪರಿಣಾಮ, ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೊಂದರೆ ಅನುಭವಿಸಿದರು.</p>.<p>ಹಲವು ವರ್ಷಗಳಿಂದ ಪ್ರೆಸಿಡೆನ್ಸಿ ಶಾಲೆಯ ವಾಹನಗಳು, ಮಕ್ಕಳು ಮತ್ತು ಪೋಷಕರು ಈ ರಸ್ತೆಯನ್ನು ಬಳಸುತ್ತಿದ್ದರು. ಆದರೆ ಈ ರಸ್ತೆಯು ನಮಗೆ ಸೇರಿದ್ದೆಂದು ಹೇಳಿಕೊಂಡಿದ್ದ ಪಕ್ಕದ ಜಮೀನಿನ ಮಾಲೀಕರಾದ ವಸಂತ ಎಂಬ ಮಹಿಳೆ ಮತ್ತು ಪ್ರೆಸಿಡೆನ್ಸಿ ಶಾಲೆಯ ನಡುವೆ ಹಲವಾರು ವರ್ಷಗಳಿಂದ ವಿವಾದ ಏರ್ಪಟ್ಟಿತ್ತು. ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ಪ್ರೆಸಿಡೆನ್ಸಿ ಶಾಲೆಯವರು 2017ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. </p>.<p>ಜಮೀನಿನ ಮಾಲೀಕರು ರಸ್ತೆಯು ತಮ್ಮ ಪರವಾಗಿ ಆಗಿದೆ ಎಂದು ಎರಡು ದಿನಗಳ ಹಿಂದೆ ಜೆಸಿಬಿಯಿಂದ ರಸ್ತೆಯಲ್ಲಿ ಗುಂಡಿ ತೆಗೆಸಿದ್ದರು. ಗುರುವಾರ ಪ್ರೆಸಿಡೆನ್ಸಿ ಶಾಲೆಯವರು ಹೈಕೋರ್ಟ್ನ ಮೊರೆಹೋಗಿ ಈ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. </p>.<p>ವಿಚಾರಣೆ ವೇಳೆ, ಸದ್ಯಕ್ಕೆ ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗದಂತೆ ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು.</p>.<p>ಈ ಮಧ್ಯೆ ಜಮೀನಿನ ಮಾಲೀಕರು ಶುಕ್ರವಾರ ಮತ್ತೆ ರಸ್ತೆಯಲ್ಲಿ ಗುಂಡಿ ತೋಡಿದ್ದರಿಂದ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ರಾಜಾನುಕುಂಟೆ ಪೊಲೀಸರು, ಜಮೀನಿನ ಮಾಲೀಕರಿಗೆ ಕೋರ್ಟ್ ಆದೇಶದ ಪ್ರತಿಯನ್ನು ತೋರಿಸಿ, ರಸ್ತೆಯನ್ನು ಮುಚ್ಚಲು ವ್ಯವಸ್ಥೆ ಕಲ್ಪಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ಆವಲಹಳ್ಳಿ ಸಮೀಪದ ಪ್ರೆಸಿಡೆನ್ಸಿ ಶಾಲೆಯ ಬಳಿ ಶಾಲಾ ವಾಹನಗಳು, ಮಕ್ಕಳು ಹಾಗೂ ಪೋಷಕರು, ಓಡಾಡುತ್ತಿದ್ದ ರಸ್ತೆಯನ್ನು ಖಾಸಗಿ ವ್ಯಕ್ತಿಯೊಬ್ಬರು ಶುಕ್ರವಾರ ಏಕಾಏಕಿ ಬಂದ್ ಮಾಡಿದ ಪರಿಣಾಮ, ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೊಂದರೆ ಅನುಭವಿಸಿದರು.</p>.<p>ಹಲವು ವರ್ಷಗಳಿಂದ ಪ್ರೆಸಿಡೆನ್ಸಿ ಶಾಲೆಯ ವಾಹನಗಳು, ಮಕ್ಕಳು ಮತ್ತು ಪೋಷಕರು ಈ ರಸ್ತೆಯನ್ನು ಬಳಸುತ್ತಿದ್ದರು. ಆದರೆ ಈ ರಸ್ತೆಯು ನಮಗೆ ಸೇರಿದ್ದೆಂದು ಹೇಳಿಕೊಂಡಿದ್ದ ಪಕ್ಕದ ಜಮೀನಿನ ಮಾಲೀಕರಾದ ವಸಂತ ಎಂಬ ಮಹಿಳೆ ಮತ್ತು ಪ್ರೆಸಿಡೆನ್ಸಿ ಶಾಲೆಯ ನಡುವೆ ಹಲವಾರು ವರ್ಷಗಳಿಂದ ವಿವಾದ ಏರ್ಪಟ್ಟಿತ್ತು. ಇದುವರೆಗೂ ಸಮಸ್ಯೆ ಬಗೆಹರಿದಿಲ್ಲ. ಇದೇ ವಿವಾದಕ್ಕೆ ಸಂಬಂಧಿಸಿದಂತೆ ಪ್ರೆಸಿಡೆನ್ಸಿ ಶಾಲೆಯವರು 2017ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. </p>.<p>ಜಮೀನಿನ ಮಾಲೀಕರು ರಸ್ತೆಯು ತಮ್ಮ ಪರವಾಗಿ ಆಗಿದೆ ಎಂದು ಎರಡು ದಿನಗಳ ಹಿಂದೆ ಜೆಸಿಬಿಯಿಂದ ರಸ್ತೆಯಲ್ಲಿ ಗುಂಡಿ ತೆಗೆಸಿದ್ದರು. ಗುರುವಾರ ಪ್ರೆಸಿಡೆನ್ಸಿ ಶಾಲೆಯವರು ಹೈಕೋರ್ಟ್ನ ಮೊರೆಹೋಗಿ ಈ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. </p>.<p>ವಿಚಾರಣೆ ವೇಳೆ, ಸದ್ಯಕ್ಕೆ ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗದಂತೆ ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು.</p>.<p>ಈ ಮಧ್ಯೆ ಜಮೀನಿನ ಮಾಲೀಕರು ಶುಕ್ರವಾರ ಮತ್ತೆ ರಸ್ತೆಯಲ್ಲಿ ಗುಂಡಿ ತೋಡಿದ್ದರಿಂದ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಆಗಮಿಸಿದ ರಾಜಾನುಕುಂಟೆ ಪೊಲೀಸರು, ಜಮೀನಿನ ಮಾಲೀಕರಿಗೆ ಕೋರ್ಟ್ ಆದೇಶದ ಪ್ರತಿಯನ್ನು ತೋರಿಸಿ, ರಸ್ತೆಯನ್ನು ಮುಚ್ಚಲು ವ್ಯವಸ್ಥೆ ಕಲ್ಪಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>