<p><strong>ಬೆಂಗಳೂರು:</strong> ರೈಲು ತಡೆದು ಪ್ರತಿಭಟನೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತಾ ಅವರಿಗೆ ಕಡೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ₹ 2 ಸಾವಿರ ದಂಡದ ಮೊತ್ತವನ್ನು ಜನಪ್ರತಿನಿಧಿಗಳ ಕೋರ್ಟ್ ₹ 1,500ಕ್ಕೆ ಇಳಿಸಿ ಆದೇಶಿಸಿದೆ.</p>.<p>ಈ ಕುರಿತ ಮೇಲ್ಮನವಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಶನಿವಾರ ವಿಚಾರಣೆ ನಡೆಸಿ ದತ್ತಾ ಅವರ ಕೋರಿಕೆಯನ್ನು ಭಾಗಶಃ ಪುರಸ್ಕರಿಸಿದ್ದಾರೆ.</p>.<p class="Subhead">ಪ್ರಕರಣವೇನು?: ‘ಶಾಸಕರಾರಿಗದ್ದ ದತ್ತಾ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂಟರ್ಸಿಟಿ ರೈಲಿನಲ್ಲಿ ತೆರಳುತ್ತಿದ್ದರು. ರೈಲು ಭರ್ತಿ ಆಗಿದ್ದ ಕಾರಣ ಜನರಲ್ ಬೋಗಿಗಳಲ್ಲಿ ಪ್ರಯಾಣಿಸಬೇಕಾದ ಪ್ರಯಾಣಿಕರು ಮೀಸಲು ಕಂಪಾರ್ಟ್ಮೆಂಟ್ಗಳಿಗೆ ಹತ್ತಿದ್ದರು.</p>.<p>ಇದಕ್ಕೆ ಟಿಟಿಇ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಪ್ರಯಾಣಿಕರನ್ನು ಜನರಲ್ ಕಂಪಾರ್ಟ್ಮೆಂಟ್ಗಳಿಗೆ ಹೋಗುವಂತೆ ದಬಾಯಿಸಿದ್ದರು. ಟಿಟಿಇ ಅನುಚಿತ ವರ್ತನೆಯನ್ನು ದತ್ತಾ ಖಂಡಿಸಿದ್ದರು. ರೈಲು ಕಡೂರಿನಲ್ಲಿ ನಿಲ್ಲುತ್ತಿದ್ದಂತೆಯೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು’ ಎಂಬುದು ಪ್ರಕರಣದ ಸಾರಾಂಶ.</p>.<p>‘ರೈಲನ್ನು ತಡೆದು ವಿಳಂಬ ಮಾಡಿದರು’ ಎಂಬ ಕಾರಣಕ್ಕೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ಸ್ಥಳೀಯ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕಡೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ₹2 ಸಾವಿರ ದಂಡ ವಿಧಿಸಿತ್ತು.</p>.<p>ಇದನ್ನು ಪ್ರಶ್ನಿಸಿ ದತ್ತಾ ಅವರು ಜನಪ್ರತಿನಿಧಿಗಳ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರೈಲು ತಡೆದು ಪ್ರತಿಭಟನೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಮುಖಂಡ ವೈ.ಎಸ್.ವಿ ದತ್ತಾ ಅವರಿಗೆ ಕಡೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ₹ 2 ಸಾವಿರ ದಂಡದ ಮೊತ್ತವನ್ನು ಜನಪ್ರತಿನಿಧಿಗಳ ಕೋರ್ಟ್ ₹ 1,500ಕ್ಕೆ ಇಳಿಸಿ ಆದೇಶಿಸಿದೆ.</p>.<p>ಈ ಕುರಿತ ಮೇಲ್ಮನವಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರು, ಶನಿವಾರ ವಿಚಾರಣೆ ನಡೆಸಿ ದತ್ತಾ ಅವರ ಕೋರಿಕೆಯನ್ನು ಭಾಗಶಃ ಪುರಸ್ಕರಿಸಿದ್ದಾರೆ.</p>.<p class="Subhead">ಪ್ರಕರಣವೇನು?: ‘ಶಾಸಕರಾರಿಗದ್ದ ದತ್ತಾ ಅವರು ಬೆಂಗಳೂರಿನಿಂದ ಹುಬ್ಬಳ್ಳಿಗೆ ಇಂಟರ್ಸಿಟಿ ರೈಲಿನಲ್ಲಿ ತೆರಳುತ್ತಿದ್ದರು. ರೈಲು ಭರ್ತಿ ಆಗಿದ್ದ ಕಾರಣ ಜನರಲ್ ಬೋಗಿಗಳಲ್ಲಿ ಪ್ರಯಾಣಿಸಬೇಕಾದ ಪ್ರಯಾಣಿಕರು ಮೀಸಲು ಕಂಪಾರ್ಟ್ಮೆಂಟ್ಗಳಿಗೆ ಹತ್ತಿದ್ದರು.</p>.<p>ಇದಕ್ಕೆ ಟಿಟಿಇ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಪ್ರಯಾಣಿಕರನ್ನು ಜನರಲ್ ಕಂಪಾರ್ಟ್ಮೆಂಟ್ಗಳಿಗೆ ಹೋಗುವಂತೆ ದಬಾಯಿಸಿದ್ದರು. ಟಿಟಿಇ ಅನುಚಿತ ವರ್ತನೆಯನ್ನು ದತ್ತಾ ಖಂಡಿಸಿದ್ದರು. ರೈಲು ಕಡೂರಿನಲ್ಲಿ ನಿಲ್ಲುತ್ತಿದ್ದಂತೆಯೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು’ ಎಂಬುದು ಪ್ರಕರಣದ ಸಾರಾಂಶ.</p>.<p>‘ರೈಲನ್ನು ತಡೆದು ವಿಳಂಬ ಮಾಡಿದರು’ ಎಂಬ ಕಾರಣಕ್ಕೆ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿ ಸ್ಥಳೀಯ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕಡೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ₹2 ಸಾವಿರ ದಂಡ ವಿಧಿಸಿತ್ತು.</p>.<p>ಇದನ್ನು ಪ್ರಶ್ನಿಸಿ ದತ್ತಾ ಅವರು ಜನಪ್ರತಿನಿಧಿಗಳ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>