ಪ್ರಶಸ್ತಿ ಪುರಸ್ಕೃತರಾದ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಈ ಸಮಾಜ ಪ್ರೀತಿಸುವ ಶಕ್ತಿಯನ್ನು ಕಳೆದುಕೊಂಡಿದೆ. ದ್ವೇಷ, ತಾತ್ಸಾರ, ಅಸೂಯೆ ಹೆಚ್ಚುತ್ತಿದೆ. ಕನ್ನಡವನ್ನು ಕಟ್ಟಲು ಅನೇಕ ದಾರಿಗಳಿವೆ. ಕನ್ನಡದಲ್ಲಿ ಸಾಹಿತ್ಯ ರಚಿಸುವ ಜತೆಗೆ ಸಂಕಷ್ಟದಲ್ಲಿರುವ ಸಾಹಿತಿಗಳನ್ನು ರಕ್ಷಿಸುವುದು ಕೂಡ ಕನ್ನಡದ ಕೆಲಸ. ಪ್ರಶಸ್ತಿಗಳಿಂದ ಬಂದ ಹಣವನ್ನು ನರಹಳ್ಳಿ ಟ್ರಸ್ಟ್ಗೆ ನೀಡಿ, ಸಾಹಿತ್ಯ ಕೆಲಸಕ್ಕೆ ವಿನಿಯೋಗಿಸುತ್ತೇನೆ’ ಎಂದು ಹೇಳಿದರು. ಪ್ರಶಸ್ತಿಯು ₹5,000 ನಗದು, ಫಲಕವನ್ನು ಹೊಂದಿದೆ.