ರಸ್ತೆ ಮಧ್ಯೆ ನಿಲ್ಲಿಸಿರುವ ವಾಹನ ತೆಗೆಯುವಂತೆ ಸೂಚಿಸಿದ್ದಕ್ಕೆ ಮುರಳಿ ಹಾಗೂ ಸ್ನೇಹಿತರು, ‘ನಾವೇನೂ ನಿಮ್ಮ ಮನೆ ಮುಂದೆ ಬಂದು ಪಾರ್ಟಿ ಮಾಡ್ತಿಲ್ಲ. ನಿಮ್ಮ ಬ್ಯಾಡ್ಜ್ ನಂಬರ್ ಕೊಡ್ರಿ. ಬೆಳಿಗ್ಗೆ ನಾವೇ ಠಾಣೆಗೆ ಬಂದು ಸಾಹೇಬ್ರ ಹತ್ರ ಮಾತಾಡ್ತೀವಿ. ಇಲ್ಲಿಂದ ಸುಮ್ಮನೆ ಹೋಗ್ಲಿಲ್ಲ ಅಂದ್ರೆ ನಾಳೆ ಆಗೋ ಪರಿಣಾಮನೇ ಬೇರೆ’ ಎಂದು ಧಮಕಿ ಹಾಕಿದ್ದರು. ಅವರ ವರ್ತನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡ ಸಿಬ್ಬಂದಿ, ಅದನ್ನು ಇನ್ಸ್ಪೆಕ್ಟರ್ ಸತ್ಯನಾರಾಯಣ ಅವರಿಗೆ ಕಳುಹಿಸಿದ್ದರು.