<p><strong>ಬಸವಕಲ್ಯಾಣ:</strong> ‘ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಯಿದೆ. ಉನ್ನತ ಶಿಕ್ಷಣ, ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುವುದರಿಂದ ಇದಕ್ಕಾಗಿ ಸಿದ್ಧತೆ ಕೈಗೊಂಡು ಯಶಸ್ಸು ಗಳಿಸಬೇಕು’ ಎಂದು ಪ್ರೊ.ಚಿತ್ರಶೇಖರ ಚಿರಳ್ಳಿ ಸಲಹೆ ನೀಡಿದರು.</p>.<p>ನಗರದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಷ್ಟಪಟ್ಟು ಓದಬೇಕು. ಜೊತೆಗೆ ಸತತ ಪ್ರಯತ್ನವಿರಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು’ ಎಂದರು.</p>.<p>ಪ್ರಾಚಾರ್ಯ ಶಿವಕುಮಾರ ಪಾಟೀಲ ಮಾತನಾಡಿ, ‘ಶಿಸ್ತು, ಸಂಯಮದಿಂದ ಇರಬೇಕು. ಕರ್ತವ್ಯ ನಿಷ್ಠರಾಗಬೇಕು. ಬದುಕಿನಲ್ಲಿ ಎದುರಾಗುವ ಉತ್ತಮ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.</p>.<p>ಎಂ.ಜಿ.ಪಾಟೀಲ ಮಾತನಾಡಿ, ‘ನಿರಂತರ ಅಧ್ಯಯನಗೈಯಬೇಕು. ಬರೀ ನೌಕರಿಗಾಗಿ ಶಿಕ್ಷಣ ಪಡೆಯದೇ ಜ್ಞಾನ ಗಳಿಕೆ ಮೂಲ ಉದ್ದೇಶವಾಗಿರಬೇಕು’ ಎಂದರು.</p>.<p>ಅಂಬಿಕಾ, ಸತೀಶ, ಆಶೀಷ, ರಾಜೇಶ್ರೀ, ವೈಷ್ಣವಿ, ಕೀರ್ತಿ ಮಾತನಾಡಿದರು.</p>.<p>ಪ್ರೊ.ವಿಠೋಬಾ ದೊಣ್ಣೆಗೌಡರ್, ಕಲ್ಯಾಣಪ್ಪ ನಾವದಗಿ, ರಮೇಶ ಕೆ.ಬಿ., ಸೂರ್ಯಕಾಂತ ನಾಸೆ, ಮಹಾದೇವ, ಸತೀಶ ರಾಠೋಡ, ಭೀಮಾಶಂಕರ ಪೂಜಾರಿ, ಲಕ್ಷ್ಮಿಬಾಯಿ ಭಂಕೂರ, ಭಾರತಿ ಮಠ, ವೈಶಾಲಿ, ಚನ್ನಮ್ಮ, ಶಿಲ್ಪಾ, ಪುಜಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ‘ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆಯಿದೆ. ಉನ್ನತ ಶಿಕ್ಷಣ, ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುವುದರಿಂದ ಇದಕ್ಕಾಗಿ ಸಿದ್ಧತೆ ಕೈಗೊಂಡು ಯಶಸ್ಸು ಗಳಿಸಬೇಕು’ ಎಂದು ಪ್ರೊ.ಚಿತ್ರಶೇಖರ ಚಿರಳ್ಳಿ ಸಲಹೆ ನೀಡಿದರು.</p>.<p>ನಗರದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಭಾನುವಾರ ನಡೆದ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಕಷ್ಟಪಟ್ಟು ಓದಬೇಕು. ಜೊತೆಗೆ ಸತತ ಪ್ರಯತ್ನವಿರಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು’ ಎಂದರು.</p>.<p>ಪ್ರಾಚಾರ್ಯ ಶಿವಕುಮಾರ ಪಾಟೀಲ ಮಾತನಾಡಿ, ‘ಶಿಸ್ತು, ಸಂಯಮದಿಂದ ಇರಬೇಕು. ಕರ್ತವ್ಯ ನಿಷ್ಠರಾಗಬೇಕು. ಬದುಕಿನಲ್ಲಿ ಎದುರಾಗುವ ಉತ್ತಮ ಅವಕಾಶಗಳ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.</p>.<p>ಎಂ.ಜಿ.ಪಾಟೀಲ ಮಾತನಾಡಿ, ‘ನಿರಂತರ ಅಧ್ಯಯನಗೈಯಬೇಕು. ಬರೀ ನೌಕರಿಗಾಗಿ ಶಿಕ್ಷಣ ಪಡೆಯದೇ ಜ್ಞಾನ ಗಳಿಕೆ ಮೂಲ ಉದ್ದೇಶವಾಗಿರಬೇಕು’ ಎಂದರು.</p>.<p>ಅಂಬಿಕಾ, ಸತೀಶ, ಆಶೀಷ, ರಾಜೇಶ್ರೀ, ವೈಷ್ಣವಿ, ಕೀರ್ತಿ ಮಾತನಾಡಿದರು.</p>.<p>ಪ್ರೊ.ವಿಠೋಬಾ ದೊಣ್ಣೆಗೌಡರ್, ಕಲ್ಯಾಣಪ್ಪ ನಾವದಗಿ, ರಮೇಶ ಕೆ.ಬಿ., ಸೂರ್ಯಕಾಂತ ನಾಸೆ, ಮಹಾದೇವ, ಸತೀಶ ರಾಠೋಡ, ಭೀಮಾಶಂಕರ ಪೂಜಾರಿ, ಲಕ್ಷ್ಮಿಬಾಯಿ ಭಂಕೂರ, ಭಾರತಿ ಮಠ, ವೈಶಾಲಿ, ಚನ್ನಮ್ಮ, ಶಿಲ್ಪಾ, ಪುಜಾ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>