ನೀಟ್ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ; 675 ಅಂಕ ಪಡೆದ ಬಸವಪ್ರಜ್ಞಾ, ಭೀಮಾಶಂಕರ

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಬಸವಪ್ರಜ್ಞಾ ಸಂಗಶೆಟ್ಟಿ, ಭೀಮಾಶಂಕರ ಹಣಮಂತರಾವ್ 2021ರ ಸೆಪ್ಟೆಂಬರ್ 12ರಂದು ನಡೆದ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ 720ಕ್ಕೆ 675 ಅಂಕ ಪಡೆದು ಅಮೋಘ ಸಾಧನೆಗೈಯುವುದರ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ ಏಳಿಗೆಯಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ತೋರಿಸಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳ ವಿವರ: ಬಾಲಗಣೇಶ 633 ಅಂಕ, ರಾಹುಲ್ ಸತೀಶ 626, ಮಾರುತಿ 602, ಶಶಿಧರ 594, ಸಹನಾ 591, ನಾಗರಾಜ್ 591, ಸಕಲೇಶ 587, ಶಿವಲೀಲಾ 585, ರಿತೇಶ 584, ಅಭಿಷೇಕ 580, ಸಂಗಶೆಟ್ಟಿ 577, ಚನ್ನಬಸವ 572, ಸತ್ವೀರ್ 572, ಅಂಕಿತಾ 570, ವಿನೀತ 565, ರಕ್ಷಿತಾ 565, ರಾಹುಲ್ 563, ಅಭಿಷೇಕ 561, ಗೌರೇಶ 561, ಸಾಗರ 559, ರಕ್ಷಿತಾ 555, ಶಿವಂ 553, ವೈಷ್ಣವಿ 550, ಜ್ಯೋತಿ 547, ನಿಕಿತಾ 545, ಐಶ್ವರ್ಯ 545, ವಿನಾಯಕ 541, ತುಷಾರ್ 541, ಸಿದ್ದೇಶ್ವರ 540, ಭವಾನಿ 539, ಎಂ.ಚೈತ್ರಾ 538, ಶ್ರೇಯಾ 538, ಪ್ರಜ್ವಲ್ 538, ಪ್ರಣಾಲಿ 535, ಸುದೀಪ 535, ರೇವಣಸಿದ್ದು 535, ತುಜೇಶ್ವರಿ 535, ಗುರುನಾಥರೆಡ್ಡಿ 533, ಶ್ರೀನಿವಾಸ 532, ಅಮಿಶಾ 528, ಸೌಂದರ್ಯ 528, ಸಾಗರ 526, ಕುಂತಿ 526, ಅಶ್ವಿನಿ 525, ಸಹನಾ 525, ಸಂತೋಷ 522, ದೀಕ್ಷಾ 516, ನೇಹಾ 513, ವಿನೋದ 506, ಶೃತಿ 506, ಮನೀಶಾ 505, ಪಾಟೀಲ ಯಶ 503, ಮಹೇಂದ್ರ 500, ಯರಂಡಗಿ ಅಂಕಿತಾ 500, ಚಂದ್ರಶೇಖರ 500, ವಿನೋದ 499, ಅಭಿಲಾಶ 499, ಬಸವ 498, ಸ್ವಾತಿ 498, ಶ್ವೇತಾ 498, ಸಚಿನ್ 498, ಮಲ್ಲಿಕಾರ್ಜುನ 498, ಕೃಷ್ಣಾ 496, ಎ.ಆರ್.ಭರತಕುಮಾರ 496, ಭಾಗ್ಯಶ್ರೀ 495, ವೈಷ್ಣವಿ 492, ತೃಪ್ತಿ 491, ಕಾವಳೆ ಸಚಿನ್ 491, ಶಿವಾನಂದ 490, ಮಹಾಲಕ್ಷ್ಮಿ 489, ಅತ್ತರ್ ರೇಷ್ಮಾ 488, ಶ್ವೇತಾ 486, ಕಾವ್ಯ 486, ಬಿ.ರಚನಾ 486, ಅನನ್ಯ 484, ಸುಪ್ರೀತ್ 484, ನಿಕೀತಾ 484, ಪರಮೇಶ್ವರ 480, ಗಿರಿರಾಜ್ 480 ಅಂಕ ಪಡೆದು ವೈದ್ಯಕೀಯ ಸೀಟ್ ಪಡೆಯಲು ಅರ್ಹತೆ ಗಿಟ್ಟಿಸಿದ್ದಾರೆ.
ವಿದ್ಯಾರ್ಥಿಗಳ ಅಮೋಘ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.