ಪ್ರತಾಪುರ ಕೆರೆ, ಸಮೀಪದ ನೀಲಕಂಠ ಕೆರೆ, ಮಂಠಾಳದ ಕಾಮಗಾರಿ ವೀಕ್ಷಿಸಿದ ಅನಿರುದ್ಧ್ ಶ್ರವಣಅವರು ‘ಇಲ್ಲಿ ಕೃಷಿ ಹೊಂಡ, ಚೌಕಿ ಹಾಗೂ ಕ್ಷೇತ್ರ ಬದು ನಿರ್ಮಾಣದ ಕೆಲಸ ಉತ್ತಮವಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಜನರ ಕುರಿತು ಕಾಳಜಿ ವಹಿಸಿರುವುದು ಇಲ್ಲಿ ನಡೆದಿರುವ ಕೆಲಸದಿಂದ ಗೊತ್ತಾಗುತ್ತದೆ. ಇನ್ನು ಮುಂದೆಯೂ ಯಾವುದೇ ತೊಂದರೆ ಆಗದಂತೆ ಎಲ್ಲರಿಗೂ ಕೆಲಸ ನೀಡಿ’ ಎಂದು ಸಲಹೆ ನೀಡಿದರು.