ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ನಳ್ಳಿ ಕೆರೆಗೆ ಖೇಣಿ ಬಾಗಿನ

Last Updated 25 ಫೆಬ್ರುವರಿ 2021, 13:53 IST
ಅಕ್ಷರ ಗಾತ್ರ

ಮನ್ನಳ್ಳಿ(ಜನವಾಡ): ಬೀದರ್ ತಾಲ್ಲೂಕಿನ ಮನ್ನಳ್ಳಿ ಕೆರೆಗೆ ಮಾಜಿ ಶಾಸಕ ಅಶೋಕ ಖೇಣಿ ಬಾಗಿನ ಅರ್ಪಿಸಿದರು.

ಮಳೆ ಇಲ್ಲದ ಕಾರಣ ಹಿಂದೆ ಕೆರೆಯಲ್ಲಿ ನೀರು ಇರಲಿಲ್ಲ. ಈ ವರ್ಷ ಉತ್ತಮ ಮಳೆಯಾದ ಪ್ರಯುಕ್ತ ಕೆರೆ ತುಂಬಿರುವುದು ಸಂತಸ ಉಂಟು ಮಾಡಿದೆ. ಶಾಸಕನಾಗಿದ್ದ ಅವಧಿಯಲ್ಲಿ ಕೆರೆ ಅಭಿವೃದ್ಧಿಗೆ ₹1 ಕೋಟಿ ಹಾಗೂ ಬಸವ ಮಂಟಪಕ್ಕೆ ₹13 ಲಕ್ಷ ಅನುದಾನ ಒದಗಿಸಿದ್ದೆ ಎಂದು ತಿಳಿಸಿದರು.

ಗ್ರಾಮದ ಲಿಂಗಾಯತ ಭವನ ಹಾಗೂ ಬಸವ ಮಂಟಪಕ್ಕೆ ಭೇಟಿ ಕೊಟ್ಟರು.

ಕಾಂಗ್ರೆಸ್ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಚಂದ್ರಶೇಖರ ಚನಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಚಂದ್ರಶೇಖರ ಮಡಕಿ, ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ, ಮುಖಂಡರಾದ ಕರೀಂಸಾಬ, ರಾಜಕುಮಾರ ಮಡಕಿ, ವಿಶ್ವನಾಥ ಇದಲಾಯಿ, ರಾಜಕುಮಾರ ಚೊಲ್ಲಾ, ಧನರಾಜ ಮೂಲಗೆ, ದೇವೇಂದ್ರ ನೂರೊದ್ದೀನ್, ಲೋಕೇಶ ಕನಶೆಟ್ಟಿ, ಶಿವಕುಮಾರ ಕುತ್ತಾಬಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT