ಬಸವಕಲ್ಯಾಣ:ರಾತ್ರಿ ಮಲಗಿದ್ದಾಗಮನೆ ಮಾಳಿಗೆ ಕುಸಿದು ಪಟ್ಟಣದಲ್ಲಿನ ಒಂದೇ ಕುಟುಂಬದ ಆರು ಮಂದಿಮೃತಪಟ್ಟಿದ್ದಾರೆ.
ಜಾಮೀಯಾ ಮಸೀದಿ ಸಮೀಪದ ಮನೆಯೊಂದರಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಮಣ್ಣಿನ ಗೋಡೆ ಹಾಗೂ ಮಣ್ಣಿನ ಮಾಳಿಗೆ(ಚಾವಣಿ)ಇತ್ತು. ಮಾಳಿಗೆ ಕುಸಿದಿದ್ದರಿಂದ ಮಲಗಿದ್ದವರಿಗೆ ಏಳಲಾಗಿಲ್ಲ.
ನದೀಮ್ ಶೇಖ್ ಹಾಗೂ ಆತನ ಪತ್ನಿ ಮತ್ತು ಮಕ್ಕಳು ಮೃತಪಟ್ಟಿದ್ದಾರೆ.
ಸಾವಿಗೀಡಾದವರ ಮೃತ ದೇಹಗಳು.
ಪೊಲೀಸರ ಸಹಾಯದಿಂದ ಶವಗಳನ್ನು ಹೊರ ತೆಗೆಯಲಾಗಿದೆ. ಶಾಸಕ ಬಿ.ನಾರಾಯಣರಾವ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.