ಬಸವಾದಿ ಶರಣರು 12 ನೇ ಶತಮಾನದಲ್ಲಿ ಕಾರ್ಯಗೈದ ಪುಣ್ಯ ನೆಲ ಇದಾಗಿದೆ. ಸಮಾಜ ಪರಿವರ್ತನೆಗಾಗಿ ನಡೆಸಿದ ಕಲ್ಯಾಣ ಕ್ರಾಂತಿಯು ಜಗತ್ತಿನ ಪ್ರಮುಖ ಕ್ರಾಂತಿಗಳಲ್ಲೊಂದು. ಶರಣರ ಕಾಯಕ, ದಾಸೋಹ ತತ್ವಕ್ಕೆ ಮತ್ತು ಅವರು ರಚಿಸಿದ ವಚನಗಳಿಗೆ ಎಲ್ಲೆಡೆ ಮನ್ನಣೆ ದೊರಕುತ್ತಿದೆ. ಇಂಥ ಮಹತ್ವದ ಸ್ಥಳದಲ್ಲಿನ ಬಸವಣ್ಣನವರ ಸ್ಮಾರಕವಾದ ಬಸವೇಶ್ವರ ದೇವಸ್ಥಾನ ಅಷ್ಟೊಂದು ಉತ್ತಮ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಅದರ ನವೀಕರಣ ನಡೆಸಲಾಗುತ್ತಿದೆ.