<p><strong>ಹುಲಸೂರ:</strong> ಭಾಲ್ಕಿ-ವಲಂಡಿ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಭಾಲ್ಕಿ ವಿಭಾಗೀಯ ಘಟಕದ ವತಿಯಿಂದ ನೂತನವಾಗಿ ಹೊಸ ಬಸ್ ಸಂಚಾರ ಆರಂಭಗೊಂಡಿದೆ. ಸಮೀಪದ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮದಲ್ಲಿ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ, ಕಬ್ಬುಗಳಿಂದ ಅಲಂಕರಿಸಿದರು. ಗ್ರಾಮದ ಮುಖಂಡರು ಶನಿವಾರ ಚಾಲನೆ ನೀಡಿದರು.</p>.<p>ನೂತನವಾಗಿ ಆರಂಭಗೊಂಡ ಭಾಲ್ಕಿ-ವಲಂಡಿ ಸಾರಿಗೆ ಮುಂಜಾನೆ 8.30ಕ್ಕೆ ವಲಂಡಿದಿಂದ ಬಿಡುಗಡೆಯಾಗಿ, ಅಳವಾಯಿ, ಮೆಹಕರ, ಕೊಂಗಳಿ, ಹುಲಸೂರ ಮಾರ್ಗವಾಗಿ ಭಾಲ್ಕಿಗೆ ತಲುಪಲಿದೆ ಎಂದು ನಿರ್ವಾಹಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಗ್ರಾಮದ ಮುಖಂಡ ಗುಂಡಪ್ಪ ಗಂದಗೆ ಮಾತನಾಡಿ, ‘ಬೆಳಿಗ್ಗೆ ಬಸ್ ಸಂಚಾರ ಇಲ್ಲದೆ ಸರ್ಕಾರಿ ಕೆಲಸದ ನಿಮಿತ್ತ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪದೆ ಸರ್ಕಾರಿ ನೌಕರರು, ಮಹಿಳೆಯರು, ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತಂದ ಬಳಿಕ ನೂತನ ಬಸ ಸಂಚಾರ ಆರಂಭಗೊಂಡಿದೆ. ಈ ಭಾಗದ ಪ್ರಯಾಣಿಕರು ನೂತನ ಸಾರಿಗೆ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ಅಳವಾಯಿ ಗ್ರಾಮದ ದಿಲೀಪ ರಾಮಚಿರೆ, ದಿಲೀಪ ಕಲ್ಯಾಣಕರ, ಸಂತೋಷ ಗಂದಗೆ, ಮಾಧವ ಬೊರೊಲೆ, ಸುಭಾಷ ಲಾಂಡಗೆ, ಸಂಜೀವ ಕುಲಕರ್ಣಿ, ಸೋಮನಾಥ ಗಂದಗೆ, ಪ್ರೇಮ ಗಂದಗೆ, ಅಮರ ಗಂದಗೆ, ಶಾಮ ಸೂರ್ಯವಂಶಿ, ಅನಿಲ ಗಂದಗೆ ಸೇರಿ ಗ್ರಾಮದ ಮುಖಂಡರು, ಯುವಕರು, ಪ್ರಯಾಣಿಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ಭಾಲ್ಕಿ-ವಲಂಡಿ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ಭಾಲ್ಕಿ ವಿಭಾಗೀಯ ಘಟಕದ ವತಿಯಿಂದ ನೂತನವಾಗಿ ಹೊಸ ಬಸ್ ಸಂಚಾರ ಆರಂಭಗೊಂಡಿದೆ. ಸಮೀಪದ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮದಲ್ಲಿ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ, ಕಬ್ಬುಗಳಿಂದ ಅಲಂಕರಿಸಿದರು. ಗ್ರಾಮದ ಮುಖಂಡರು ಶನಿವಾರ ಚಾಲನೆ ನೀಡಿದರು.</p>.<p>ನೂತನವಾಗಿ ಆರಂಭಗೊಂಡ ಭಾಲ್ಕಿ-ವಲಂಡಿ ಸಾರಿಗೆ ಮುಂಜಾನೆ 8.30ಕ್ಕೆ ವಲಂಡಿದಿಂದ ಬಿಡುಗಡೆಯಾಗಿ, ಅಳವಾಯಿ, ಮೆಹಕರ, ಕೊಂಗಳಿ, ಹುಲಸೂರ ಮಾರ್ಗವಾಗಿ ಭಾಲ್ಕಿಗೆ ತಲುಪಲಿದೆ ಎಂದು ನಿರ್ವಾಹಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>ಗ್ರಾಮದ ಮುಖಂಡ ಗುಂಡಪ್ಪ ಗಂದಗೆ ಮಾತನಾಡಿ, ‘ಬೆಳಿಗ್ಗೆ ಬಸ್ ಸಂಚಾರ ಇಲ್ಲದೆ ಸರ್ಕಾರಿ ಕೆಲಸದ ನಿಮಿತ್ತ ಕಚೇರಿಗೆ ಸಮಯಕ್ಕೆ ಸರಿಯಾಗಿ ತಲುಪದೆ ಸರ್ಕಾರಿ ನೌಕರರು, ಮಹಿಳೆಯರು, ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತಂದ ಬಳಿಕ ನೂತನ ಬಸ ಸಂಚಾರ ಆರಂಭಗೊಂಡಿದೆ. ಈ ಭಾಗದ ಪ್ರಯಾಣಿಕರು ನೂತನ ಸಾರಿಗೆ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.</p>.<p>ಅಳವಾಯಿ ಗ್ರಾಮದ ದಿಲೀಪ ರಾಮಚಿರೆ, ದಿಲೀಪ ಕಲ್ಯಾಣಕರ, ಸಂತೋಷ ಗಂದಗೆ, ಮಾಧವ ಬೊರೊಲೆ, ಸುಭಾಷ ಲಾಂಡಗೆ, ಸಂಜೀವ ಕುಲಕರ್ಣಿ, ಸೋಮನಾಥ ಗಂದಗೆ, ಪ್ರೇಮ ಗಂದಗೆ, ಅಮರ ಗಂದಗೆ, ಶಾಮ ಸೂರ್ಯವಂಶಿ, ಅನಿಲ ಗಂದಗೆ ಸೇರಿ ಗ್ರಾಮದ ಮುಖಂಡರು, ಯುವಕರು, ಪ್ರಯಾಣಿಕರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>