<p><strong>ಭಾಲ್ಕಿ:</strong> ಭೀಮಣ್ಣ ಖಂಡ್ರೆ ಅವರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕಾತಿ ಮಾಡುವಾಗ ಕೇವಲ ಪ್ರತಿಭಾವಂತಿಕೆಗೆ ಮಹತ್ವ ನೀಡುತ್ತಿದ್ದರು ಹೊರತು ತಮ್ಮ ಜಾತಿ, ಪ್ರದೇಶ ಎಂದು ಭೇದಭಾವ ಮಾಡುತ್ತಿರಲಿಲ್ಲ.</p><p>ಗುಣಾತ್ಮಕ ಶಿಕ್ಷಣದಿಂದ ಈ ಭಾಗದ ಪ್ರಗತಿ ಸಾಧ್ಯ ಎಂದು ಬಲವಾಗಿ ನಂಬಿದ್ದರು. ತಮ್ಮ ಸಂಸ್ಥೆ ಅಡಿಯಲ್ಲಿ ನಡೆಯುತ್ತಿದ್ದ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಲ್ಲಿನ ಕಲಿಕಾಮಟ್ಟ ಯಾವುದೇ ಕಾರಣಕ್ಕೂ ಕುಸಿಯಬಾರದು. ಈ ನಿಟ್ಟಿನಲ್ಲಿ ಶಿಕ್ಷಕ ಸಿಬ್ಬಂದಿ ಶ್ರಮ ವಹಿಸಿ ದುಡಿದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದುಡಿಯಬೇಕು ಎಂದು ಸಿಬ್ಬಂದಿಗೆ ಸಭೆಯಲ್ಲಿ ಖಡಕ್ಕಾಗಿ ಹೇಳುತ್ತಿದ್ದರು.</p><p>ಶೈಕ್ಷಣಿಕ ಫಲಿತಾಂಶದಲ್ಲಿ ಏರುಪೇರಾದಲ್ಲಿ ಮುಲಾಜಿಲ್ಲದೇ ಸಂಬಂಧಪಟ್ಟ ಶಿಕ್ಷಕ, ಉಪನ್ಯಾಸಕರಿಗೆ ತರಾಟೆಗೆ ತೆಗೆದುಕೊಂಡು ಇನ್ನೂ ಚೆನ್ನಾಗಿ ದುಡಿಯಬೇಕು ಎಂದು ಎಚ್ಚರಿಸುತ್ತಿದ್ದರು.</p><p>ಸರ್ಕಾರದಲ್ಲಿ ಸಚಿವ, ಶಾಸಕರಾದ ಮೇಲೆ ದೊರೆಯುವ ಸರ್ಕಾರಿ ಬಂಗಲೆಯನ್ನು ಅಧಿಕಾರ ಕಳೆದುಕೊಂಡ ನಂತರವೂ ತಮ್ಮದೇ ಎಂಬಂತೆ ವರ್ತಿಸುವ ರಾಜಕಾರಣಿಗಳಿಗೇನೂ ಕಡಿಮೆ ಇಲ್ಲ. ಆದರೆ, 1992-94ರಲ್ಲಿ ಎಂ.ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಖಂಡ್ರೆ ಅವರು ಸರ್ಕಾರ ಪತನವಾದ ಕೇವಲ ಅರ್ಧ ಗಂಟೆಯಲ್ಲಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು.</p><p>ಅಸಂಭವವನ್ನು ಸಂಭವವನ್ನಾಗಿಸುವ ಉಕ್ಕಿನ ಎದೆಗಾರಿಕೆ, ದೃಢ ಸಂಕಲ್ಪ, ದೂರದೃಷ್ಟಿತ್ವ ಹೊಂದಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ:</strong> ಭೀಮಣ್ಣ ಖಂಡ್ರೆ ಅವರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕಾತಿ ಮಾಡುವಾಗ ಕೇವಲ ಪ್ರತಿಭಾವಂತಿಕೆಗೆ ಮಹತ್ವ ನೀಡುತ್ತಿದ್ದರು ಹೊರತು ತಮ್ಮ ಜಾತಿ, ಪ್ರದೇಶ ಎಂದು ಭೇದಭಾವ ಮಾಡುತ್ತಿರಲಿಲ್ಲ.</p><p>ಗುಣಾತ್ಮಕ ಶಿಕ್ಷಣದಿಂದ ಈ ಭಾಗದ ಪ್ರಗತಿ ಸಾಧ್ಯ ಎಂದು ಬಲವಾಗಿ ನಂಬಿದ್ದರು. ತಮ್ಮ ಸಂಸ್ಥೆ ಅಡಿಯಲ್ಲಿ ನಡೆಯುತ್ತಿದ್ದ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳಲ್ಲಿನ ಕಲಿಕಾಮಟ್ಟ ಯಾವುದೇ ಕಾರಣಕ್ಕೂ ಕುಸಿಯಬಾರದು. ಈ ನಿಟ್ಟಿನಲ್ಲಿ ಶಿಕ್ಷಕ ಸಿಬ್ಬಂದಿ ಶ್ರಮ ವಹಿಸಿ ದುಡಿದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ದುಡಿಯಬೇಕು ಎಂದು ಸಿಬ್ಬಂದಿಗೆ ಸಭೆಯಲ್ಲಿ ಖಡಕ್ಕಾಗಿ ಹೇಳುತ್ತಿದ್ದರು.</p><p>ಶೈಕ್ಷಣಿಕ ಫಲಿತಾಂಶದಲ್ಲಿ ಏರುಪೇರಾದಲ್ಲಿ ಮುಲಾಜಿಲ್ಲದೇ ಸಂಬಂಧಪಟ್ಟ ಶಿಕ್ಷಕ, ಉಪನ್ಯಾಸಕರಿಗೆ ತರಾಟೆಗೆ ತೆಗೆದುಕೊಂಡು ಇನ್ನೂ ಚೆನ್ನಾಗಿ ದುಡಿಯಬೇಕು ಎಂದು ಎಚ್ಚರಿಸುತ್ತಿದ್ದರು.</p><p>ಸರ್ಕಾರದಲ್ಲಿ ಸಚಿವ, ಶಾಸಕರಾದ ಮೇಲೆ ದೊರೆಯುವ ಸರ್ಕಾರಿ ಬಂಗಲೆಯನ್ನು ಅಧಿಕಾರ ಕಳೆದುಕೊಂಡ ನಂತರವೂ ತಮ್ಮದೇ ಎಂಬಂತೆ ವರ್ತಿಸುವ ರಾಜಕಾರಣಿಗಳಿಗೇನೂ ಕಡಿಮೆ ಇಲ್ಲ. ಆದರೆ, 1992-94ರಲ್ಲಿ ಎಂ.ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಖಂಡ್ರೆ ಅವರು ಸರ್ಕಾರ ಪತನವಾದ ಕೇವಲ ಅರ್ಧ ಗಂಟೆಯಲ್ಲಿ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು.</p><p>ಅಸಂಭವವನ್ನು ಸಂಭವವನ್ನಾಗಿಸುವ ಉಕ್ಕಿನ ಎದೆಗಾರಿಕೆ, ದೃಢ ಸಂಕಲ್ಪ, ದೂರದೃಷ್ಟಿತ್ವ ಹೊಂದಿದ್ದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>