‘ಜಿಲ್ಲಾ ರಂಗಮಂದಿರದಲ್ಲಿ 10 ಮಳಿಗೆಗಳನ್ನು ಹಾಕಲಾಗಿದೆ. ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ರುಚಿಕರ ಊಟದ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಮೊದಲ ದಿನವಾದ ಶನಿವಾರ ಭೋಜನದಲ್ಲಿ ರವೆ ಹುಗ್ಗಿ, ಅನ್ನ, ಸಾಂಬಾರು ಇರಲಿದೆ. ಭಜ್ಜಿ, ಸಜ್ಜೆ ರೊಟ್ಟಿ, ಬಿಳಿಜೋಳದ ರೊಟ್ಟಿ, ಅನ್ನ ಹಾಗೂ ಸಾಂಬಾರು ಭಾನುವಾರದ ಊಟದ ವಿಶೇಷ ಆಗಿರಲಿದೆ’ ಎನ್ನುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ.