<p><strong>ಕಮಲನಗರ</strong>: ‘ಅಂಗದ ಮೇಲೆ ಲಿಂಗವುಳ್ಳವರನ್ನು ಸಂಗಮನಾಥನೆಂಬ ಉದಂತ್ತ ಚಿಂತನೆ ಹೊಂದಿರುವ ಬಸವಾದಿ ಪ್ರಮಥರು ಜಾತಿ, ವರ್ಗ ವರ್ಣವೆನ್ನದೆ ಬದುಕು ಪರಿಶುದ್ಧತೆಗೆ ಆದ್ಯತೆ ನೀಡಿದರು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.</p>.<p>ತಾಲ್ಲೂಕಿನ ನಿಡೋದಾ ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ಜರುಗಿದ ಮನೆಗೊಂದು ಬಸವ ಜ್ಯೋತಿ ಕಾರ್ಯಕ್ರಮದ ಸಮಾರೋಪದ ನಿಮಿತ್ತ ಹಮ್ಮಿಕೊಂಡ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಜೀವನದಲ್ಲಿ ಶಾಂತಿ ಸಮಾಧಾನ ಸಹಬಾಳ್ವೆ ನೆಲೆಗೊಳ್ಳಲು ನೆಮ್ಮದಿ ಮುಖ್ಯ. ಅಂತಹ ನೆಮ್ಮದಿ ಸಂತೃಪ್ತಿ ಪಡೆಯಬೇಕೆಂದರೆ ಇಷ್ಟಲಿಂಗ ದೀಕ್ಷೆ ಮೂಲ ಸಾಧನವಾಗುತ್ತದೆ. ಜೀವನ ಪರಿಶುದ್ಧಗೊಳಿಸಿಕೊಳ್ಳಲು ಪ್ರೇರಿತ ಶಕ್ತಿಯಾಗುತ್ತದೆ’ ಎಂದರು.</p>.<p>‘108 ಜನ ದೀಕ್ಷೆ ಪಡೆಯುವುದರ ಮೂಲಕ ಬದುಕಿನ ಸಾರ್ಥಕತೆ ಮೆರೆದಿದ್ದಾರೆ. ದೀಕ್ಷೆ ಪಡೆಯುವ ಪ್ರೇರಣೆ ನೀಡಿದ ಪ್ರವಚನಕಾರರಾದ ಸುರೇಖಾ ಶಿವಶರಣಪ್ಪ ವಲ್ಲೆಪೂರೆಯವರ ಕಾರ್ಯ ಶ್ಲಾಘನೀಯವಾದದ್ದು. ದಂಪತಿ ಪ್ರವಚನ ನಡೆಸುವುದರ ಮೂಲಕ ಲಿಂಗ ದೀಕ್ಷೆಗೆ ಪ್ರೋತ್ಸಾಹ ನೀಡಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಮಾತೆ ಗಂಗಾದೇವಿ ಮಾತನಾಡಿ, ‘ದೀಕ್ಷೆ ಪಡೆಯುವುದರಿಂದ ನಮ್ಮ ಜೀವನದಲ್ಲಿ ಹೊಸ ಸಂಚಲನವನ್ನುಂಟು ಮಾಡುತ್ತದೆ. ನಮ್ಮೊಂದಿಗೆ ಶಾಶ್ವತವಾಗಿ ಬರುವುದು ಇಷ್ಟಲಿಂಗವೇ’ ಎಂದು ನುಡಿದರು.</p>.<p>ಮಹಾಲಿಂಗ ದೇವರು, ಪ್ರಭುಲಿಂಗದೇವರು, ಸುರೇಖಾ ವಲ್ಲೆಪೂರೆ, ಶಿವಶರಣಪ್ಪ ವಲ್ಲೆಪೂರೆ, ಮಹೇಶ ಪಾಟೀಲ, ನೌನಾಥ ತಡಕಲೆ, ಸಂಜೀವಕುಮಾರ ಜುಮ್ಮಾ, ಧನರಾಜ ಕ್ಯಾದಪ್ಪ, ಸಿದ್ದಪ್ಪ ಕಲ್ಯಾಣೆ, ನಾಗನಾಥ ಸ್ವಾಮಿ, ವೈಜಿನಾಥ ಖೇಳಗೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ</strong>: ‘ಅಂಗದ ಮೇಲೆ ಲಿಂಗವುಳ್ಳವರನ್ನು ಸಂಗಮನಾಥನೆಂಬ ಉದಂತ್ತ ಚಿಂತನೆ ಹೊಂದಿರುವ ಬಸವಾದಿ ಪ್ರಮಥರು ಜಾತಿ, ವರ್ಗ ವರ್ಣವೆನ್ನದೆ ಬದುಕು ಪರಿಶುದ್ಧತೆಗೆ ಆದ್ಯತೆ ನೀಡಿದರು’ ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.</p>.<p>ತಾಲ್ಲೂಕಿನ ನಿಡೋದಾ ಗ್ರಾಮದಲ್ಲಿ ಒಂದು ತಿಂಗಳ ಪರ್ಯಂತ ಜರುಗಿದ ಮನೆಗೊಂದು ಬಸವ ಜ್ಯೋತಿ ಕಾರ್ಯಕ್ರಮದ ಸಮಾರೋಪದ ನಿಮಿತ್ತ ಹಮ್ಮಿಕೊಂಡ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಜೀವನದಲ್ಲಿ ಶಾಂತಿ ಸಮಾಧಾನ ಸಹಬಾಳ್ವೆ ನೆಲೆಗೊಳ್ಳಲು ನೆಮ್ಮದಿ ಮುಖ್ಯ. ಅಂತಹ ನೆಮ್ಮದಿ ಸಂತೃಪ್ತಿ ಪಡೆಯಬೇಕೆಂದರೆ ಇಷ್ಟಲಿಂಗ ದೀಕ್ಷೆ ಮೂಲ ಸಾಧನವಾಗುತ್ತದೆ. ಜೀವನ ಪರಿಶುದ್ಧಗೊಳಿಸಿಕೊಳ್ಳಲು ಪ್ರೇರಿತ ಶಕ್ತಿಯಾಗುತ್ತದೆ’ ಎಂದರು.</p>.<p>‘108 ಜನ ದೀಕ್ಷೆ ಪಡೆಯುವುದರ ಮೂಲಕ ಬದುಕಿನ ಸಾರ್ಥಕತೆ ಮೆರೆದಿದ್ದಾರೆ. ದೀಕ್ಷೆ ಪಡೆಯುವ ಪ್ರೇರಣೆ ನೀಡಿದ ಪ್ರವಚನಕಾರರಾದ ಸುರೇಖಾ ಶಿವಶರಣಪ್ಪ ವಲ್ಲೆಪೂರೆಯವರ ಕಾರ್ಯ ಶ್ಲಾಘನೀಯವಾದದ್ದು. ದಂಪತಿ ಪ್ರವಚನ ನಡೆಸುವುದರ ಮೂಲಕ ಲಿಂಗ ದೀಕ್ಷೆಗೆ ಪ್ರೋತ್ಸಾಹ ನೀಡಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಮಾತೆ ಗಂಗಾದೇವಿ ಮಾತನಾಡಿ, ‘ದೀಕ್ಷೆ ಪಡೆಯುವುದರಿಂದ ನಮ್ಮ ಜೀವನದಲ್ಲಿ ಹೊಸ ಸಂಚಲನವನ್ನುಂಟು ಮಾಡುತ್ತದೆ. ನಮ್ಮೊಂದಿಗೆ ಶಾಶ್ವತವಾಗಿ ಬರುವುದು ಇಷ್ಟಲಿಂಗವೇ’ ಎಂದು ನುಡಿದರು.</p>.<p>ಮಹಾಲಿಂಗ ದೇವರು, ಪ್ರಭುಲಿಂಗದೇವರು, ಸುರೇಖಾ ವಲ್ಲೆಪೂರೆ, ಶಿವಶರಣಪ್ಪ ವಲ್ಲೆಪೂರೆ, ಮಹೇಶ ಪಾಟೀಲ, ನೌನಾಥ ತಡಕಲೆ, ಸಂಜೀವಕುಮಾರ ಜುಮ್ಮಾ, ಧನರಾಜ ಕ್ಯಾದಪ್ಪ, ಸಿದ್ದಪ್ಪ ಕಲ್ಯಾಣೆ, ನಾಗನಾಥ ಸ್ವಾಮಿ, ವೈಜಿನಾಥ ಖೇಳಗೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>