<p><strong>ಬೀದರ್:</strong> ಎರಡು ವಾರಗಳ ಅವಧಿಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 2 ಸಾವಿರ ಕಡಿಮೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕೆಜಿಗೆ ₹ 40 ಇದೆ. ಆದರೆ, ಬೆಳ್ಳುಳ್ಳಿ ಬೆಲೆ ₹ 200ಕ್ಕೆ ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.</p>.<p>ನವರಾತ್ರಿ ಹಾಗೂ ದಸರಾ ಹಬ್ಬದ ಹೊಸ್ತಿಲಲ್ಲೇ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 3 ಸಾವಿರ ಹೆಚ್ಚಾಗಿದೆ. ತರಕಾರಿ ರಾಜ ಬದನೆಕಾಯಿ ಕಿರೀಟಕ್ಕೆ ಬೆಲೆ ಹೆಚ್ಚಳದ ಗರಿ ಮೂಡಿದೆ. ಹಿರೇಕಾಯಿ ಬೆಲೆ ಮಾತ್ರ ಹಿಗ್ಗಿಲ್ಲ.</p>.<p>ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್ಗೆ ಒಂದೂವರೆ ಸಾವಿರ ರೂಪಾಯಿ ಕುಸಿದಿದೆ. ಹೂಕೋಸು, ಮೆಂತೆಸೊಪ್ಪು, ಸಬ್ಬಸಗಿ, ಪಾಲಕ್ ಬೆಲೆ ತಲಾ ₹ 1 ಸಾವಿರ ಇಳಿದಿದೆ. ಈರುಳ್ಳಿ ಬೆಲೆ ₹ 6 ಸಾವಿರ ತಲುಪಿದಾಗಲೇ ಖಾನಾವಳಿ ಮಾಲೀಕರು ಗ್ರಾಹಕರಿಗೆ ಊಟದಲ್ಲಿ ಪ್ರತ್ಯೇಕವಾಗಿ ಈರುಳ್ಳಿ ಕೊಡುವುದನ್ನು ನಿಲ್ಲಿಸಿದ್ದಾರೆ. ಇದೀಗ ಈರುಳ್ಳಿ ಬೆಲೆ ₹ 500 ಇಳಿದರೂ ಭೋಜನದಲ್ಲಿ ಈರುಳ್ಳಿ ಕೊಡುತ್ತಿಲ್ಲ.</p>.<p>ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಅಲೂಗಡ್ಡೆ, ಬೀಟ್ರೂಟ್, ಎಲೆಕೋಸು ಹಾಗೂ ಬೀನ್ಸ್ ಬೆಲೆ ಸ್ಥಿರವಾಗಿದೆ. ಹೋಟೆಲ್, ರೆಸ್ಟೋರಂಟ್ ಹಾಗೂ ಖಾನಾವಳಿ ಮಾಲೀಕರು ಈ ತರಕಾರಿಗಳನ್ನೇ ಅಧಿಕ ಪ್ರಮಾಣದಲ್ಲಿ ಖರೀದಿಸಿದ್ದಾರೆ. ನಗರದ ಯಾವುದೇ ಖಾನಾವಳಿಗೆ ಹೋದರೂ ಅಲ್ಲಿ ಹಿರೇಕಾಯಿ, ತೊಂಡೆಕಾಯಿ ಪಲ್ಯಗಳನ್ನೇ ಬಡಿಸಲಾಗುತ್ತಿದೆ.</p>.<p>ಬೀದರ್ ತರಕಾರಿ ಸಗಟು ಮಾರುಕಟ್ಟೆಗೆ ಹೈದರಾಬಾದ್ನಿಂದ ಬೀನ್ಸ್, ಗಜ್ಜರಿ, ಆಲೂಗಡ್ಡೆ, ಹೂಕೋಸು, ಬೀಟ್ರೂಟ್, ಎಲೆಕೋಸು, ತೊಂಡೆಕಾಯಿ ಬಂದಿವೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.<br /><br />‘ಬೀದರ್ ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಕೊತಂಬರಿ, ಟೊಮೆಟೊ, ಪಾಲಕ್, ಬೆಂಡೆಕಾಯಿ, ಹಿರೇಕಾಯಿ, ಬದನೆಕಾಯಿ ಹಾಗೂ ಸಬ್ಬಸಗಿ ಮಾರುಕಟ್ಟೆಗೆ ಬಂದಿವೆ’ ಎಂದು ಗಾಂಧಿಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಎರಡು ವಾರಗಳ ಅವಧಿಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 2 ಸಾವಿರ ಕಡಿಮೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕೆಜಿಗೆ ₹ 40 ಇದೆ. ಆದರೆ, ಬೆಳ್ಳುಳ್ಳಿ ಬೆಲೆ ₹ 200ಕ್ಕೆ ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.</p>.<p>ನವರಾತ್ರಿ ಹಾಗೂ ದಸರಾ ಹಬ್ಬದ ಹೊಸ್ತಿಲಲ್ಲೇ ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 3 ಸಾವಿರ ಹೆಚ್ಚಾಗಿದೆ. ತರಕಾರಿ ರಾಜ ಬದನೆಕಾಯಿ ಕಿರೀಟಕ್ಕೆ ಬೆಲೆ ಹೆಚ್ಚಳದ ಗರಿ ಮೂಡಿದೆ. ಹಿರೇಕಾಯಿ ಬೆಲೆ ಮಾತ್ರ ಹಿಗ್ಗಿಲ್ಲ.</p>.<p>ಕೊತಂಬರಿ ಬೆಲೆ ಪ್ರತಿ ಕ್ವಿಂಟಲ್ಗೆ ಒಂದೂವರೆ ಸಾವಿರ ರೂಪಾಯಿ ಕುಸಿದಿದೆ. ಹೂಕೋಸು, ಮೆಂತೆಸೊಪ್ಪು, ಸಬ್ಬಸಗಿ, ಪಾಲಕ್ ಬೆಲೆ ತಲಾ ₹ 1 ಸಾವಿರ ಇಳಿದಿದೆ. ಈರುಳ್ಳಿ ಬೆಲೆ ₹ 6 ಸಾವಿರ ತಲುಪಿದಾಗಲೇ ಖಾನಾವಳಿ ಮಾಲೀಕರು ಗ್ರಾಹಕರಿಗೆ ಊಟದಲ್ಲಿ ಪ್ರತ್ಯೇಕವಾಗಿ ಈರುಳ್ಳಿ ಕೊಡುವುದನ್ನು ನಿಲ್ಲಿಸಿದ್ದಾರೆ. ಇದೀಗ ಈರುಳ್ಳಿ ಬೆಲೆ ₹ 500 ಇಳಿದರೂ ಭೋಜನದಲ್ಲಿ ಈರುಳ್ಳಿ ಕೊಡುತ್ತಿಲ್ಲ.</p>.<p>ಹಿರೇಕಾಯಿ, ಬೆಂಡೆಕಾಯಿ, ತೊಂಡೆಕಾಯಿ, ಅಲೂಗಡ್ಡೆ, ಬೀಟ್ರೂಟ್, ಎಲೆಕೋಸು ಹಾಗೂ ಬೀನ್ಸ್ ಬೆಲೆ ಸ್ಥಿರವಾಗಿದೆ. ಹೋಟೆಲ್, ರೆಸ್ಟೋರಂಟ್ ಹಾಗೂ ಖಾನಾವಳಿ ಮಾಲೀಕರು ಈ ತರಕಾರಿಗಳನ್ನೇ ಅಧಿಕ ಪ್ರಮಾಣದಲ್ಲಿ ಖರೀದಿಸಿದ್ದಾರೆ. ನಗರದ ಯಾವುದೇ ಖಾನಾವಳಿಗೆ ಹೋದರೂ ಅಲ್ಲಿ ಹಿರೇಕಾಯಿ, ತೊಂಡೆಕಾಯಿ ಪಲ್ಯಗಳನ್ನೇ ಬಡಿಸಲಾಗುತ್ತಿದೆ.</p>.<p>ಬೀದರ್ ತರಕಾರಿ ಸಗಟು ಮಾರುಕಟ್ಟೆಗೆ ಹೈದರಾಬಾದ್ನಿಂದ ಬೀನ್ಸ್, ಗಜ್ಜರಿ, ಆಲೂಗಡ್ಡೆ, ಹೂಕೋಸು, ಬೀಟ್ರೂಟ್, ಎಲೆಕೋಸು, ತೊಂಡೆಕಾಯಿ ಬಂದಿವೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.<br /><br />‘ಬೀದರ್ ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್ ಹಾಗೂ ಭಾಲ್ಕಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದಿಂದ ಕೊತಂಬರಿ, ಟೊಮೆಟೊ, ಪಾಲಕ್, ಬೆಂಡೆಕಾಯಿ, ಹಿರೇಕಾಯಿ, ಬದನೆಕಾಯಿ ಹಾಗೂ ಸಬ್ಬಸಗಿ ಮಾರುಕಟ್ಟೆಗೆ ಬಂದಿವೆ’ ಎಂದು ಗಾಂಧಿಗಂಜ್ ತರಕಾರಿ ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>