<p><strong>ಬಸವಕಲ್ಯಾಣ:</strong> ‘ಗುರುಕೃಪೆ ಇದ್ದಲ್ಲಿ ಭಗವಂತನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸಂತರ, ಶರಣರ ಸಂಗ ಮಾಡುವುದು ಅಗತ್ಯ’ ಎಂದು ಕೇಂದ್ರ ಸಚಿವೆ ಸಾದ್ವಿ ನಿರಂಜನಜ್ಯೋತಿ ಹೇಳಿದರು.</p>.<p>ತಾಲ್ಲೂಕಿನ ಮುಚಳಂಬದಲ್ಲಿ ಭಾನುವಾರ ನಡೆದ ನಾಗಭೂಷಣ ಶಿವಯೋಗಿಗಳ 50 ನೇ ಸ್ಮರಣೋತ್ಸವ ಹಾಗೂ ಪ್ರಣವಾನಂದ ಸ್ವಾಮೀಜಿಯ ಅವರ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಭಗವಂತನನ್ನು ಹುಡುಕುತ್ತಾ ಹರಿದ್ವಾರ, ರಾಮೇಶ್ವರಕ್ಕೆ ಹೋಗಿ ಹಣ, ಸಮಯ ವ್ಯರ್ಥ ಮಾಡದೇ ಸತ್ಸಂಗದಲ್ಲಿ ಪಾಲ್ಗೊಂಡರೆ ಇಲ್ಲೆ ಕಾಣಬಹುದು. ಮಾನಸ ಸರೋವರದಲ್ಲಿ ದೇಹದ ಮಲೀನತೆ ಕಳೆಯಬಹುದು. ಆದರೆ, ಇಂಥಲ್ಲಿ ಬಂದರೆ ಮನಸ್ಸು ಶುದ್ಧಗೊಳ್ಳುತ್ತದೆ. ಈ ಭಾಗ ಹೈದರಾಬಾದ್ ನಿಜಾಮರಿಂದ ಮುಕ್ತಿ ಹೊಂದುವಲ್ಲಿ ಸರ್ದಾರ್ ಪಟೇಲ್ ಅವರ ಪ್ರಯತ್ನ ಬಹಳಷ್ಟಿದೆ. ಇಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಸಹಕಾರ ನೀಡಲಾಗುವುದು’ ಎಂದರು.</p>.<p>ಬೀದರ್ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಇದು ಸಾಮಾಜಿಕ ಸಮಾನತೆಯ ಹರಿಕಾರ ಹಾಗೂ ಅನುಭವ ಮಂಟಪ ಸ್ಥಾಪಿಸಿದ ಬಸವಣ್ಣನವರ ನೆಲವಾಗಿದೆ. ಅವರ ತತ್ವ ಪಾಲನೆ ಅಗತ್ಯ’ ಎಂದರು.</p>.<p>ಮಠಾಧಿಪತಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ನಾಗಭೂಷಣ ಶಿವಯೋಗಿಗಳು ಸರ್ವಸಮಾನತೆಯ ಆರೂಢ ಪರಂಪರೆ ಎತ್ತಿ ಹಿಡಿದಿದ್ದರು. ಕೈಯಲ್ಲಿ ಕಾಯಕ, ಮನದಲ್ಲಿ ಪ್ರೇಮ, ಹೃದಯದಿಂದ ದೇವರ ನಾಮಸ್ಮರಣೆ ಮಾಡಿದರೆ ಜೀವನ ಸಫಲವಾಗುತ್ತದೆ’ ಎಂದು ಹೇಳಿದರು.</p>.<p>ಹಿರಿಯ ಮುಖಂಡ ಶಿವರಾಜ ನರಶೆಟ್ಟಿ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಗಣೇಶಾನಂದ ಸ್ವಾಮೀಜಿ, ಕಾದರಹಳ್ಳಿ ಫಾಲಾಕ್ಷ, ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ರಮಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.</p>.<p>ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ ಪಾಗೋಜಿ ಹಾಗೂ ಡೀನ್ ಪ್ರೊ.ವಿ.ಗಿರೀಶಚಂದ್ರ ಅವರಿಗೆ ‘ಪ್ರಣವಶ್ರೀ ಪ್ರಶಸ್ತಿ’ ನೀಡಲಾಯಿತು.</p>.<p>ಶಾಸಕ ಬಿ.ನಾರಾಯಣರಾವ್, ಬೋರಗಿ ಮಹಾಲಿಂಗೇಶ್ವರ ಸ್ವಾಮೀಜಿ, ಯಳಸಂಗಿ ಪರಮಾನಂದ ಸ್ವಾಮೀಜಿ, ತಹಶೀಲ್ದಾರ್ ಸಾವಿತ್ರಿ ಸಲಗರ, ವೈಜನಾಥ ಕಾಮಶೆಟ್ಟಿ, ಸಂಜಯ ವಾಡಿಕರ್, ಶೇಷಪ್ಪ ಗುರಣ್ಣ, ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಎಚ್.ಕಾಶಿನಾಥ, ಅಮರ ಕಾಮಶೆಟ್ಟಿ, ಶಾಂತಕುಮಾರ ಜ್ಯೋತೆಪ್ಪ ಇದ್ದರು.</p>.<p>ಯೋಗ ಶಿಬಿರ: ಇದಕ್ಕೂ ಮೊದಲು ಯೋಗ ಶಿಬಿರವನ್ನು ಪ್ರಣವಾನಂದ ಸ್ವಾಮೀಜಿ ಉದ್ಘಾಟಿಸಿದರು. ಉಚಿತವಾಗಿ ಯೋಗಾಸನ ಕಲಿಸಿದರೆ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದರು.</p>.<p>ತಾಲ್ಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ತ್ರಿಪುರಾಂತ, ಪರಮಾನಂದ ಸ್ವಾಮೀಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ‘ಗುರುಕೃಪೆ ಇದ್ದಲ್ಲಿ ಭಗವಂತನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಸಂತರ, ಶರಣರ ಸಂಗ ಮಾಡುವುದು ಅಗತ್ಯ’ ಎಂದು ಕೇಂದ್ರ ಸಚಿವೆ ಸಾದ್ವಿ ನಿರಂಜನಜ್ಯೋತಿ ಹೇಳಿದರು.</p>.<p>ತಾಲ್ಲೂಕಿನ ಮುಚಳಂಬದಲ್ಲಿ ಭಾನುವಾರ ನಡೆದ ನಾಗಭೂಷಣ ಶಿವಯೋಗಿಗಳ 50 ನೇ ಸ್ಮರಣೋತ್ಸವ ಹಾಗೂ ಪ್ರಣವಾನಂದ ಸ್ವಾಮೀಜಿಯ ಅವರ ಸುವರ್ಣ ಮಹೋತ್ಸವದಲ್ಲಿ ಅವರು ಮಾತನಾಡಿದರು.</p>.<p>‘ಭಗವಂತನನ್ನು ಹುಡುಕುತ್ತಾ ಹರಿದ್ವಾರ, ರಾಮೇಶ್ವರಕ್ಕೆ ಹೋಗಿ ಹಣ, ಸಮಯ ವ್ಯರ್ಥ ಮಾಡದೇ ಸತ್ಸಂಗದಲ್ಲಿ ಪಾಲ್ಗೊಂಡರೆ ಇಲ್ಲೆ ಕಾಣಬಹುದು. ಮಾನಸ ಸರೋವರದಲ್ಲಿ ದೇಹದ ಮಲೀನತೆ ಕಳೆಯಬಹುದು. ಆದರೆ, ಇಂಥಲ್ಲಿ ಬಂದರೆ ಮನಸ್ಸು ಶುದ್ಧಗೊಳ್ಳುತ್ತದೆ. ಈ ಭಾಗ ಹೈದರಾಬಾದ್ ನಿಜಾಮರಿಂದ ಮುಕ್ತಿ ಹೊಂದುವಲ್ಲಿ ಸರ್ದಾರ್ ಪಟೇಲ್ ಅವರ ಪ್ರಯತ್ನ ಬಹಳಷ್ಟಿದೆ. ಇಲ್ಲಿ ಅವರ ಪ್ರತಿಮೆ ಸ್ಥಾಪನೆಗೆ ಸಹಕಾರ ನೀಡಲಾಗುವುದು’ ಎಂದರು.</p>.<p>ಬೀದರ್ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಇದು ಸಾಮಾಜಿಕ ಸಮಾನತೆಯ ಹರಿಕಾರ ಹಾಗೂ ಅನುಭವ ಮಂಟಪ ಸ್ಥಾಪಿಸಿದ ಬಸವಣ್ಣನವರ ನೆಲವಾಗಿದೆ. ಅವರ ತತ್ವ ಪಾಲನೆ ಅಗತ್ಯ’ ಎಂದರು.</p>.<p>ಮಠಾಧಿಪತಿ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ‘ನಾಗಭೂಷಣ ಶಿವಯೋಗಿಗಳು ಸರ್ವಸಮಾನತೆಯ ಆರೂಢ ಪರಂಪರೆ ಎತ್ತಿ ಹಿಡಿದಿದ್ದರು. ಕೈಯಲ್ಲಿ ಕಾಯಕ, ಮನದಲ್ಲಿ ಪ್ರೇಮ, ಹೃದಯದಿಂದ ದೇವರ ನಾಮಸ್ಮರಣೆ ಮಾಡಿದರೆ ಜೀವನ ಸಫಲವಾಗುತ್ತದೆ’ ಎಂದು ಹೇಳಿದರು.</p>.<p>ಹಿರಿಯ ಮುಖಂಡ ಶಿವರಾಜ ನರಶೆಟ್ಟಿ, ಎಐಸಿಸಿ ಸದಸ್ಯ ಆನಂದ ದೇವಪ್ಪ, ಗಣೇಶಾನಂದ ಸ್ವಾಮೀಜಿ, ಕಾದರಹಳ್ಳಿ ಫಾಲಾಕ್ಷ, ಹಂಪಿ ವಿದ್ಯಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ರಮಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.</p>.<p>ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ ಪಾಗೋಜಿ ಹಾಗೂ ಡೀನ್ ಪ್ರೊ.ವಿ.ಗಿರೀಶಚಂದ್ರ ಅವರಿಗೆ ‘ಪ್ರಣವಶ್ರೀ ಪ್ರಶಸ್ತಿ’ ನೀಡಲಾಯಿತು.</p>.<p>ಶಾಸಕ ಬಿ.ನಾರಾಯಣರಾವ್, ಬೋರಗಿ ಮಹಾಲಿಂಗೇಶ್ವರ ಸ್ವಾಮೀಜಿ, ಯಳಸಂಗಿ ಪರಮಾನಂದ ಸ್ವಾಮೀಜಿ, ತಹಶೀಲ್ದಾರ್ ಸಾವಿತ್ರಿ ಸಲಗರ, ವೈಜನಾಥ ಕಾಮಶೆಟ್ಟಿ, ಸಂಜಯ ವಾಡಿಕರ್, ಶೇಷಪ್ಪ ಗುರಣ್ಣ, ಪ್ರಕಾಶ ಕಾಮಶೆಟ್ಟಿ, ಕೆ.ಕಾಶಪ್ಪ, ಎಚ್.ಕಾಶಿನಾಥ, ಅಮರ ಕಾಮಶೆಟ್ಟಿ, ಶಾಂತಕುಮಾರ ಜ್ಯೋತೆಪ್ಪ ಇದ್ದರು.</p>.<p>ಯೋಗ ಶಿಬಿರ: ಇದಕ್ಕೂ ಮೊದಲು ಯೋಗ ಶಿಬಿರವನ್ನು ಪ್ರಣವಾನಂದ ಸ್ವಾಮೀಜಿ ಉದ್ಘಾಟಿಸಿದರು. ಉಚಿತವಾಗಿ ಯೋಗಾಸನ ಕಲಿಸಿದರೆ ಅದನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದರು.</p>.<p>ತಾಲ್ಲೂಕು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಡಾ.ಬಸವರಾಜ ಸ್ವಾಮಿ ತ್ರಿಪುರಾಂತ, ಪರಮಾನಂದ ಸ್ವಾಮೀಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>