ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್ಪಿ ಚನ್ನಬಸವಣ್ಣ ವರ್ಗಾವಣೆ: ಗಾಂಜಾ, ಗುಟ್ಕಾ ಮಾಫಿಯಾಕ್ಕೆ ಸರ್ಕಾರ ಮಣಿಯಿತೇ?

Published : 4 ಜುಲೈ 2024, 5:30 IST
Last Updated : 4 ಜುಲೈ 2024, 5:30 IST
ಫಾಲೋ ಮಾಡಿ
Comments
ಪ್ರದೀಪ್ ಗುಂಟಿ

ಪ್ರದೀಪ್ ಗುಂಟಿ

ಸಮಾಜಕ್ಕೆ ಏನಾದರೂ ಉತ್ತಮ ಕೆಲಸ ಮಾಡಲು ಮುಂದಾದರೆ ಭ್ರಷ್ಟಾಚಾರಿಗಳ ಕಣ್ಣು ಕೆಂಪಗಾಗುತ್ತವೆ. ಉತ್ತಮರಿಗೆ ಕೆಲಸ ಮಾಡಲು ಬಿಡುವುದಿಲ್ಲ.
ಪ್ರಕಾಶ್‌ ಎಸ್‌. ಸ್ಥಳೀಯ ನಿವಾಸಿ
ಜಿಲ್ಲೆಯಲ್ಲಿ ಬಹುತೇಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್‌ ಹಾಕಿದವರು ಚನ್ನಬಸವಣ್ಣ. ಅವರ ವರ್ಗಾವಣೆ ರದ್ದುಗೊಳಿಸಿ ಇನ್ನೂ ಕೆಲ ತಿಂಗಳು ಮುಂದುವರಿಸಲಿ.
ಶಿವಕುಮಾರ ಸ್ವಾಮೀಜಿ ಭದ್ರೇಶ್ವರ ಮಠ ಬಾವಗಿ
‘ಅವಿಸ್ಮರಣೀಯ ದಿನಗಳು’
ಬೀದರ್‌ನಲ್ಲಿ ನಾನು ಕೆಲಸ ಮಾಡಿದ ದಿನಗಳು ಅವಿಸ್ಮರಣೀಯ. ಬೀದರ್‌ ಭಾರತದಲ್ಲಿದೆ. ಅದೇ ರೀತಿ ಇಡೀ ಭಾರತ ಬೀದರ್‌ನಲ್ಲಿದೆ. ಜನರ ಸಹಕಾರ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯ ಸಹಕಾರದಿಂದ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗಿದೆ. ಚನ್ನಬಸವಣ್ಣ ಎಸ್‌.ಎಲ್‌. ನಿರ್ಗಮಿತ ಎಸ್ಪಿ
ಸರ್ಕಾರದ ನಿರ್ಧಾರಕ್ಕೆ ಟೀಕೆ
ಜಿಲ್ಲೆಯಲ್ಲಿ ಸಾಕಷ್ಟು ಸುಧಾರಣೆಗಳ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಅವರನ್ನು ವರ್ಗಾವಣೆಗೊಳಿಸಿರುವ ಸರ್ಕಾರದ ಕ್ರಮವನ್ನು ಸಾರ್ವಜನಿಕರು ಕಟುವಾಗಿ ಟೀಕಿಸಿದ್ದಾರೆ. ಫೇಸ್‌ಬುಕ್‌ ‘ಎಕ್ಸ್‌’ ಇನ್‌ಸ್ಟಾಗ್ರಾಂ ವಾಟ್ಸ್‌ಆ್ಯಪ್‌ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಚನ್ನಬಸವಣ್ಣ ಅವರು ವರ್ಗಾವಣೆ ಆದೇಶ ಪ್ರತಿ ಅವರ ಭಾವಚಿತ್ರ ಹಂಚಿಕೊಂಡು ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ‘ಹಿಂದುಳಿದ ಬೀದರ್‌ ಜಿಲ್ಲೆಯ ಅಭಿವೃದ್ಧಿ ಕಾನೂನು ಸುವ್ಯವಸ್ಥೆ ಸರಿ ಇರುವುದು ಸರ್ಕಾರಕ್ಕೆ ಬೇಡವಾದಂತಿದೆ’ ಎಂದು ಹೀಗಳೆದಿದ್ದಾರೆ.
ಚನ್ನಬಸವಣ್ಣ ನಿರ್ಗಮನ ಪ್ರದೀಪ್‌ ಅಧಿಕಾರ ಸ್ವೀಕಾರ
ಬೀದರ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರನ್ನು ರಾಜ್ಯ ಸರ್ಕಾರ ಬೆಂಗಳೂರಿಗೆ ವರ್ಗಾವಣೆಗೊಳಿಸಿದ್ದು ಅವರ ಜಾಗಕ್ಕೆ ಪ್ರದೀಪ್ ಗುಂಟಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಚನ್ನಬಸವಣ್ಣ ಅವರನ್ನು ಬೆಂಗಳೂರಿನ ಪ್ರಧಾನ ಕಚೇರಿಯ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಾರಾಗೃಹ ವಿಭಾಗದಲ್ಲಿದ್ದ ಪ್ರದೀಪ್ ಗುಂಟಿ ಅವರನ್ನು ಬೀದರ್ ಎಸ್ಪಿಯಾಗಿ ನೇಮಕ ಮಾಡಿದೆ. ಚನ್ನಬಸವಣ್ಣ ಅವರು ಬುಧವಾರ ಮಧ್ಯಾಹ್ನ ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಅವರಿಗೆ ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಿದರು. ಪ್ರದೀಪ್‌ ಗುಂಟಿ ಅವರು ಬುಧವಾರ ರಾತ್ರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT