<p><strong>ಹುಮನಾಬಾದ್:</strong> ‘ಕರಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಆಯೋಜನೆ ಮಾಡಿರುವುದು ಶ್ಲಾಘನೀಯ’ ಎಂದು ಹುಡಗಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶಾಂತವೀರ ಸಿದ್ದೇಶ್ವರ ತಿಳಿಸಿದರು.</p>.<p>ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪಶು ಪ್ರದರ್ಶನದಲ್ಲಿ ಮಾತನಾಡಿದರು.</p>.<p>ತಾಲ್ಲೂಕಿನಲ್ಲಿ ಎಲ್ಲಿಯೂ ಈ ರೀತಿಯಾಗಿ ಪಶು ಪ್ರದರ್ಶನ ಆಗುವುದಿಲ್ಲ. ಆದರೆ ಹುಡಗಿ ಹಿರೇಮಠ ಸಂಸ್ಥಾನದಿಂದ ವಿಶೇಷವಾಗಿ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಮಾಡಿ ರೈತರಿಗೆ ಬಹುಮಾನ ವಿತರಣೆ ಮಾಡಿ ಹುಮ್ಮಸ್ಸು ತುಂಬುತ್ತಿರುವುದು ಸಂತಸ ತಂದಿದೆ ಎಂದರು.</p>.<p>ಪಶು ಪ್ರದರ್ಶನದಲ್ಲಿ ಹುಡಗಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮಲ್ಲಿರುವ ಪಶುಗಳಿಗೆ ಸಿಂಗಾರ ಮಾಡಿ ಜಾತ್ರಾ ಮಹೋತ್ಸವದಲ್ಲಿ ಪ್ರದರ್ಶನ ಮಾಡಿ ನೋಡುಗರ ಗಮನ ಸೆಳೆಯುವಂತೆ ಮಾಡಿದ್ದರು.</p>.<p>ಸುಮಾರು 150ಕ್ಕೂ ಅಧಿಕ ಪಶುಗಳ ಪ್ರದರ್ಶನ ಜರುಗಿತು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬವ್ವ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ನರಸಪ್ಪ , ಡಾ.ಗೋವಿಂದ್, ಗುರುಲಿಂಗಪ್ಪ ಮೇಲದೋಡ್ಡಿ, ಡಾ.ಶಾಂತವೀರ ಗೋಪ, ಡಾ.ಗಣಾಧಿಶ್ವರ ಹಿರೇಮಠ, ಡಾ.ಶಶಿಧರ್, ಯೋಗೇಂದ್ರ , ಸಂಜು ಪಾಟೀಲ, ನೀಲಕಂಠ, ಸಂತೋಷ, ವಿಠ್ಠಲ್ , ಸಂಗಮೇಶ, ಶ್ವೇತಾರಾಣಿ, ಶಿಲ್ಪಾ, ಸುನೀಲ, ಶಿವಕುಮಾರ ಸಲಗಾರ, ಜಮೀರ್, ರವೀಂದ್ರಯ್ಯ, ಅನಿಲ್ ನಂದಿ, ವಿನಾಯಕ ರುದನೂರ್, ನಾಗರಾಜ, ರಾಜು, ಅಮರ, ಲಿಂಗರಾಜ, ಗೌರಿಶಂಕರ ಪರ್ತಾಪುರೆ, ಹಣಮಂತ ಸೇರಿ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್:</strong> ‘ಕರಿ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಆಯೋಜನೆ ಮಾಡಿರುವುದು ಶ್ಲಾಘನೀಯ’ ಎಂದು ಹುಡಗಿ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶಾಂತವೀರ ಸಿದ್ದೇಶ್ವರ ತಿಳಿಸಿದರು.</p>.<p>ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಪಶು ಪ್ರದರ್ಶನದಲ್ಲಿ ಮಾತನಾಡಿದರು.</p>.<p>ತಾಲ್ಲೂಕಿನಲ್ಲಿ ಎಲ್ಲಿಯೂ ಈ ರೀತಿಯಾಗಿ ಪಶು ಪ್ರದರ್ಶನ ಆಗುವುದಿಲ್ಲ. ಆದರೆ ಹುಡಗಿ ಹಿರೇಮಠ ಸಂಸ್ಥಾನದಿಂದ ವಿಶೇಷವಾಗಿ ಜಾತ್ರಾ ಮಹೋತ್ಸವದಲ್ಲಿ ಪಶು ಪ್ರದರ್ಶನ ಮಾಡಿ ರೈತರಿಗೆ ಬಹುಮಾನ ವಿತರಣೆ ಮಾಡಿ ಹುಮ್ಮಸ್ಸು ತುಂಬುತ್ತಿರುವುದು ಸಂತಸ ತಂದಿದೆ ಎಂದರು.</p>.<p>ಪಶು ಪ್ರದರ್ಶನದಲ್ಲಿ ಹುಡಗಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮಲ್ಲಿರುವ ಪಶುಗಳಿಗೆ ಸಿಂಗಾರ ಮಾಡಿ ಜಾತ್ರಾ ಮಹೋತ್ಸವದಲ್ಲಿ ಪ್ರದರ್ಶನ ಮಾಡಿ ನೋಡುಗರ ಗಮನ ಸೆಳೆಯುವಂತೆ ಮಾಡಿದ್ದರು.</p>.<p>ಸುಮಾರು 150ಕ್ಕೂ ಅಧಿಕ ಪಶುಗಳ ಪ್ರದರ್ಶನ ಜರುಗಿತು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬವ್ವ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ನರಸಪ್ಪ , ಡಾ.ಗೋವಿಂದ್, ಗುರುಲಿಂಗಪ್ಪ ಮೇಲದೋಡ್ಡಿ, ಡಾ.ಶಾಂತವೀರ ಗೋಪ, ಡಾ.ಗಣಾಧಿಶ್ವರ ಹಿರೇಮಠ, ಡಾ.ಶಶಿಧರ್, ಯೋಗೇಂದ್ರ , ಸಂಜು ಪಾಟೀಲ, ನೀಲಕಂಠ, ಸಂತೋಷ, ವಿಠ್ಠಲ್ , ಸಂಗಮೇಶ, ಶ್ವೇತಾರಾಣಿ, ಶಿಲ್ಪಾ, ಸುನೀಲ, ಶಿವಕುಮಾರ ಸಲಗಾರ, ಜಮೀರ್, ರವೀಂದ್ರಯ್ಯ, ಅನಿಲ್ ನಂದಿ, ವಿನಾಯಕ ರುದನೂರ್, ನಾಗರಾಜ, ರಾಜು, ಅಮರ, ಲಿಂಗರಾಜ, ಗೌರಿಶಂಕರ ಪರ್ತಾಪುರೆ, ಹಣಮಂತ ಸೇರಿ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>