<p>ಬೀದರ್: ಈ ಬಾರಿಯ ಗಣೇಶ ಉತ್ಸವವು ವಿಘ್ನ ನಿವಾರಕನ ಆರಾಧನೆ ಜತೆಗೆ ಕೊರೊನಾ ಜಾಗೃತಿಗೂ ವೇದಿಕೆಯಾಗಿದೆ.</p>.<p>ನಗರದ ಅನೇಕ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಅಳವಡಿಸಿರುವ ಥರ್ಮೋಕಾಲ್ ಚಿತ್ರ, ಬ್ಯಾನರ್ ಹಾಗೂ ಫಲಕಗಳು ಸಾರ್ವಜನಿಕರಲ್ಲಿ ಕೊರೊನಾ ವೈರಾಣುವಿನ ಅರಿವು ಮೂಡಿಸುತ್ತಿವೆ. ಅಷ್ಟು ಮಾತ್ರವಲ್ಲದೆ, ಸುರಕ್ಷತಾ ನಿಯಮಗಳ ಪಾಲನೆಯ ಮಹತ್ವವನ್ನೂ ಮನವರಿಕೆ ಮಾಡಿಕೊಡುತ್ತಿವೆ.</p>.<p>ಶಿವನೊಂದಿಗೆ ಗಣಪ ಇರುವ ಮೂರ್ತಿ ಪ್ರತಿಷ್ಠಾಪಿಸಿರುವ ಎಲ್ಐಸಿ ಕಚೇರಿ ಸಮೀಪದ ಶಿವಸೇನಾ ಗಣೇಶ ಮಂಡಳಿಯು ಮಂಟಪದಲ್ಲಿ ಕೊರೊನಾ ಜಾಗೃತಿಯ ಥರ್ಮೋಕಾಲ್ ಚಿತ್ರಗಳನ್ನು ಅಳವಡಿಸಿ ಗಮನ ಸೆಳೆದಿದೆ.</p>.<p>ಥರ್ಮೋಕಾಲ್ನಲ್ಲಿ ಕೆತ್ತನೆ ಮಾಡಿ ಬಣ್ಣ ಬಳಿಯಲಾದ ಮಹಾಮಾರಿ ಕೊರೊನಾದ ರುದ್ರಸ್ವರೂಪ, ಮಾಸ್ಕ್ ಧರಿಸಿ ಬೆಡ್ ಮೇಲೆ ಮಲಗಿರುವ ರೋಗಿಯ ತಪಾಸಣೆ ನಡೆಸುತ್ತಿರುವ ಲಂಬೋದರ ಹಾಗೂ ಸ್ಯಾನಿಟೈಸರ್ ಬಾಟಲಿಯ ಚಿತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ.</p>.<p>ಇನ್ನು ಅನೇಕ ಗಣೇಶ ಮಂಡಳಗಳು ‘ನೋ ಮಾಸ್ಕ್ ನೋ ಎಂಟ್ರಿ’, ‘ಸಾಮಾಜಿಕ ಅಂತರ ಕಾಪಾಡಿ’ ಎನ್ನುವ ಫಲಕಗಳನ್ನು ಹಾಕಿವೆ. ಕೆಲ ಮಂಡಳಗಳು ಮಂಟಪ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಸಹ ಇಟ್ಟಿವೆ. ಸರ್ಕಾರದ ನಿಯಮಗಳನ್ನು ಪಾಲಿಸುತ್ತಿವೆ.</p>.<p>ಕೊರೊನಾ ಕರಾಳ ಛಾಯೆಯ ನಡುವೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ದೊರೆತರೂ ಹೆಚ್ಚಿನ ಸಂಭ್ರಮ ಕಂಡು<br />ಬರುತ್ತಿಲ್ಲ.</p>.<p>ಕೊರೊನಾ ಕಾರಣ ಮಂಟಪಗಳಿಗೆ ಭೇಟಿ ನೀಡಿ ಏಕದಂತನ ದರ್ಶನ ಪಡೆಯುವ ಭಕ್ತರ ಸಂಖ್ಯೆ ಕಡಿಮೆ ಇದೆ. ಗಣೇಶ ಮಹಾಮಂಡಳದ ಪ್ರಕಾರ ನಗರದಲ್ಲಿ 120 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೀದರ್: ಈ ಬಾರಿಯ ಗಣೇಶ ಉತ್ಸವವು ವಿಘ್ನ ನಿವಾರಕನ ಆರಾಧನೆ ಜತೆಗೆ ಕೊರೊನಾ ಜಾಗೃತಿಗೂ ವೇದಿಕೆಯಾಗಿದೆ.</p>.<p>ನಗರದ ಅನೇಕ ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಅಳವಡಿಸಿರುವ ಥರ್ಮೋಕಾಲ್ ಚಿತ್ರ, ಬ್ಯಾನರ್ ಹಾಗೂ ಫಲಕಗಳು ಸಾರ್ವಜನಿಕರಲ್ಲಿ ಕೊರೊನಾ ವೈರಾಣುವಿನ ಅರಿವು ಮೂಡಿಸುತ್ತಿವೆ. ಅಷ್ಟು ಮಾತ್ರವಲ್ಲದೆ, ಸುರಕ್ಷತಾ ನಿಯಮಗಳ ಪಾಲನೆಯ ಮಹತ್ವವನ್ನೂ ಮನವರಿಕೆ ಮಾಡಿಕೊಡುತ್ತಿವೆ.</p>.<p>ಶಿವನೊಂದಿಗೆ ಗಣಪ ಇರುವ ಮೂರ್ತಿ ಪ್ರತಿಷ್ಠಾಪಿಸಿರುವ ಎಲ್ಐಸಿ ಕಚೇರಿ ಸಮೀಪದ ಶಿವಸೇನಾ ಗಣೇಶ ಮಂಡಳಿಯು ಮಂಟಪದಲ್ಲಿ ಕೊರೊನಾ ಜಾಗೃತಿಯ ಥರ್ಮೋಕಾಲ್ ಚಿತ್ರಗಳನ್ನು ಅಳವಡಿಸಿ ಗಮನ ಸೆಳೆದಿದೆ.</p>.<p>ಥರ್ಮೋಕಾಲ್ನಲ್ಲಿ ಕೆತ್ತನೆ ಮಾಡಿ ಬಣ್ಣ ಬಳಿಯಲಾದ ಮಹಾಮಾರಿ ಕೊರೊನಾದ ರುದ್ರಸ್ವರೂಪ, ಮಾಸ್ಕ್ ಧರಿಸಿ ಬೆಡ್ ಮೇಲೆ ಮಲಗಿರುವ ರೋಗಿಯ ತಪಾಸಣೆ ನಡೆಸುತ್ತಿರುವ ಲಂಬೋದರ ಹಾಗೂ ಸ್ಯಾನಿಟೈಸರ್ ಬಾಟಲಿಯ ಚಿತ್ರಗಳನ್ನು ಇಲ್ಲಿ ಅಳವಡಿಸಲಾಗಿದೆ.</p>.<p>ಇನ್ನು ಅನೇಕ ಗಣೇಶ ಮಂಡಳಗಳು ‘ನೋ ಮಾಸ್ಕ್ ನೋ ಎಂಟ್ರಿ’, ‘ಸಾಮಾಜಿಕ ಅಂತರ ಕಾಪಾಡಿ’ ಎನ್ನುವ ಫಲಕಗಳನ್ನು ಹಾಕಿವೆ. ಕೆಲ ಮಂಡಳಗಳು ಮಂಟಪ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಸಹ ಇಟ್ಟಿವೆ. ಸರ್ಕಾರದ ನಿಯಮಗಳನ್ನು ಪಾಲಿಸುತ್ತಿವೆ.</p>.<p>ಕೊರೊನಾ ಕರಾಳ ಛಾಯೆಯ ನಡುವೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ದೊರೆತರೂ ಹೆಚ್ಚಿನ ಸಂಭ್ರಮ ಕಂಡು<br />ಬರುತ್ತಿಲ್ಲ.</p>.<p>ಕೊರೊನಾ ಕಾರಣ ಮಂಟಪಗಳಿಗೆ ಭೇಟಿ ನೀಡಿ ಏಕದಂತನ ದರ್ಶನ ಪಡೆಯುವ ಭಕ್ತರ ಸಂಖ್ಯೆ ಕಡಿಮೆ ಇದೆ. ಗಣೇಶ ಮಹಾಮಂಡಳದ ಪ್ರಕಾರ ನಗರದಲ್ಲಿ 120 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>