ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆದರೆ ಕೋವಿಡ್‌ ದೂರ: ಡಾ. ಸಂಗಾರೆಡ್ಡಿ

Last Updated 15 ಏಪ್ರಿಲ್ 2021, 6:33 IST
ಅಕ್ಷರ ಗಾತ್ರ

ಕಮಲನಗರ: ‘45 ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ತಾಲ್ಲೂಕಿನ ಪ್ರತಿಯೊಬ್ಬ ನಾಗರಿಕ ಕಡ್ಡಾಯವಾಗಿ ಲಸಿಕೆ ಪಡೆದು ಕೋವಿಡ್-19 ನಿಂದ ರಕ್ಷಣೆ ಪಡೆಯಬೇಕು’ ಎಂದು ಇಲ್ಲಿನ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ
ಡಾ. ಸಂಗಾರೆಡ್ಡಿ ಮನವಿ ಮಾಡಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕೋವಿಡ್ ಲಸಿಕಾ ಉಪಕೇಂದ್ರದಲ್ಲಿ ಜನಜಾಗೃತಿ ಕುರಿತು ನಡೆದ ಅಭಿಯಾನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

‘ಮಾರ್ಚ್‌ ತಿಂಗಳಲ್ಲಿ 1196 ಜನ ಸೇರಿ ಇದುವರೆಗೆ 1588 ಜನರಿಗೆ ಲಸಿಕೆ ನೀಡಿದ್ದು, ಯಾರಿಗೂ ಅಡ್ಡಪರಿಣಾಮಗಳಾಗಿಲ್ಲ’ ಎಂದರು.

ಡಾ.ಸಚಿನ್‌, ಡಾ.ಪವನ, ಡಾ.ರಾಹುಲ, ಡಾ.ಅಪರ್ಣಾ, ನರಸಿಂಗ್‌ ಗಾಯಕವಾಡ್, ಸಂದೀಪ ಬಿರಾದಾರ, ಅನೀಲಕುಮಾರ ತೋರ್ಣಾ, ಮಹೇಶ, ಹೇಮಾ, ಚನ್ನಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT