ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಲೋಡ್ ಸಮೇತ ದರೋಡೆ: ₹24 ಲಕ್ಷ ಮೌಲ್ಯದ ಅಕ್ಕಿ, ಕಡಲೆ, ತೊಗರಿ ಬೇಳೆ ದರೋಡೆ

Last Updated 7 ಮೇ 2021, 5:14 IST
ಅಕ್ಷರ ಗಾತ್ರ

ಭಾಲ್ಕಿ: ಸಿನಿಮಿಯ ರೀತಿಯಲ್ಲಿ ದುಷ್ಕರ್ಮಿಗಳು ಲಾರಿ ಲೋಡ್ ಸಮೇತ ದರೋಡೆ ಮಾಡಿರುವ ಘಟನೆ ತಾಲ್ಲೂಕಿನ ವಳಸಂಗ ಕ್ರಾಸ್ ಸಮೀಪ ಮಂಗಳವಾರ ರಾತ್ರಿ ಸಂಭವಿಸಿದೆ.

ಉದಗೀರನ್ ಸಚಿನ್ ಆಗ್ರೋ ಫುಡ್ ಎಲ್.ಎಲ್.ಪಿ ಮೀಲ್‌ನಿಂದ 30 ಕ್ವಿಂಟಲ್ ಕಡಲೆ ಬೇಳೆ, ₹1.98 ಲಕ್ಷ ಮೌಲ್ಯದ ಅಕ್ಕಿ ಮತ್ತು ಸಂದೀಪ ದಾಲ್ ಇಂಡಸ್ಟ್ರೀಜ್ ಮೀಲ್‌ನಿಂದ 225 ಕ್ವಿಂಟಲ್ ತೊಗರಿ ಬೇಳೆ ಹೊತ್ತುಕೊಂಡು ಬರುತ್ತಿದ್ದ ಎಪಿ 26 ಟಿ.ಡಿ.4284 ಸಂಖ್ಯೆಯ ಲಾರಿ ಕಾವೇರಿ, ನೆಲ್ಲೂರ್ ಕಡೆ ಹೊರಟಿತ್ತು. ಮಂಗಳವಾರ ರಾತ್ರಿ 9.30 ಗಂಟೆ ಸುಮಾರಿಗೆ ವಳಸಂಗ ಕ್ರಾಸ್ ಸಮೀಪ ಲೋಡ್ ಹೊತ್ತಿದ್ದ ಲಾರಿ ಬರುತ್ತಿದ್ದಂತೆಯೇ 5 ಬೈಕ್‌ಗಳ ಮೇಲೆ ಬಂದ 10 ದುಷ್ಕರ್ಮಿಗಳು ಲಾರಿಯನ್ನು ತಡೆದಿದ್ದಾರೆ. ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಹೆದರಿಸಿ ಇಬ್ಬರನ್ನು ಕೆಳಗೆ ಇಳಿಸಿ ಲೋಡ್ ಲಾರಿ ಸಮೇತ ಪರಾರಿ ಆಗಿದ್ದಾರೆ.

ಈ ಕುರಿತು ನೆಲ್ಲೂರ್ ಮೂಲದ ಲಾರಿ ಚಾಲಕ ಟಿ.ಬಾಬು ರಾಮಯ್ಯ ನೀಡಿರುವ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT