<p><strong>ಹುಲಸೂರ(ಬೀದರ್ ಜಿಲ್ಲೆ):</strong> ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಉಕ್ಕಿ ಹರಿಯುತ್ತಿರುವ ನದಿಯ ಪ್ರವಾಹದ ನೀರಿಗಿಳಿದು ಬೆಳೆಹಾನಿ ಪರಿಶೀಲಿಸಿದರು.</p>.<p>ಬೀದರ್ ಜಿಲ್ಲೆಯ ಮಾಂಜ್ರಾ ನದಿಯು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ರೈತರೊಬ್ಬರು ಬೆಳೆದ ತೊಗರಿ ಬೆಳೆಯು ಸಂಪೂರ್ಣ ಜಲಾವೃತಗೊಂಡಿತ್ತು. ರೈತರ ಜೊತೆಗೆ ಶಾಸಕರೂ ಪ್ರವಾಹದ ನೀರಿನಲ್ಲಿ ಇಳಿದು ಬೆಳೆಯನ್ನು ವೀಕ್ಷಿಸಿದರು. </p>.<p>‘ಕೃಷಿ ಹಾಗೂ ಕಂದಾಯ ಸಚಿವರು ಬೆಂಗಳೂರು, ಮಂಡ್ಯ, ಬೆಳಗಾವಿ ಜಿಲ್ಲೆಗಳನ್ನು ಬಿಟ್ಟು, ಕೂಡಲೇ ಬೀದರ್ ಜಿಲ್ಲೆಯ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ರೈತರ ಗೋಳು ಕೇಳಬೇಕು. ಸರ್ಕಾರ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಶಾಸಕ ಶರಣು ಸಲಗರ ಅವರು ಸೊಂಟದವರೆಗಿನ ಮಟ್ಟದ್ದ ಪ್ರವಾಹದ ನೀರಲ್ಲಿಯೇ ನಿಂತು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ(ಬೀದರ್ ಜಿಲ್ಲೆ):</strong> ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಉಕ್ಕಿ ಹರಿಯುತ್ತಿರುವ ನದಿಯ ಪ್ರವಾಹದ ನೀರಿಗಿಳಿದು ಬೆಳೆಹಾನಿ ಪರಿಶೀಲಿಸಿದರು.</p>.<p>ಬೀದರ್ ಜಿಲ್ಲೆಯ ಮಾಂಜ್ರಾ ನದಿಯು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ರೈತರೊಬ್ಬರು ಬೆಳೆದ ತೊಗರಿ ಬೆಳೆಯು ಸಂಪೂರ್ಣ ಜಲಾವೃತಗೊಂಡಿತ್ತು. ರೈತರ ಜೊತೆಗೆ ಶಾಸಕರೂ ಪ್ರವಾಹದ ನೀರಿನಲ್ಲಿ ಇಳಿದು ಬೆಳೆಯನ್ನು ವೀಕ್ಷಿಸಿದರು. </p>.<p>‘ಕೃಷಿ ಹಾಗೂ ಕಂದಾಯ ಸಚಿವರು ಬೆಂಗಳೂರು, ಮಂಡ್ಯ, ಬೆಳಗಾವಿ ಜಿಲ್ಲೆಗಳನ್ನು ಬಿಟ್ಟು, ಕೂಡಲೇ ಬೀದರ್ ಜಿಲ್ಲೆಯ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ರೈತರ ಗೋಳು ಕೇಳಬೇಕು. ಸರ್ಕಾರ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಶಾಸಕ ಶರಣು ಸಲಗರ ಅವರು ಸೊಂಟದವರೆಗಿನ ಮಟ್ಟದ್ದ ಪ್ರವಾಹದ ನೀರಲ್ಲಿಯೇ ನಿಂತು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>