‘ನೀರಿನ ರಭಸ ಹೆಚ್ಚಾದ ಪರಿಣಾಮ ನದಿ ದಡದಲ್ಲಿರುವ ಹೊಲಗಳಿಗೆ ನೀರು ನುಗ್ಗಿದ್ದರಿಂದ ಮಣ್ಣಿನೊಂದಿಗೆ ಬೆಳೆ ಕೊಚ್ಚಿಕೊಂಡು ಹೋಗಿವೆ. ಒಂದು ಎಕರೆ ಮೆಣಸಿನಕಾಯಿ, ಎರಡು ಎಕರೆ ಕಬ್ಬು, ಮೂರು ಎಕರೆ ಕಬ್ಬು, ಮಾವು, ಕರಿಬೇವು, ತರಕಾರಿ ಎಲ್ಲವೂ ನೀರು ಪಾಲಾಗಿವೆ. ಕನಿಷ್ಠ ₹4 ಲಕ್ಷ ರೂಪಾಯಿ ನಷ್ಟವಾಗಿದೆ’ ಎಂದು ನೋವು ತೋಡಿಕೊಂಡರು ರೈತ ಬಸಪ್ಪ ಚೌರೆ.