<p><strong>ಜನವಾಡ: </strong>ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಕಬ್ಬು ಕಟಾವು ಆದ ಜಮೀನುಗಳಲ್ಲಿ ಲಘು ಪೋಷಕಾಂಶ ಕೊರತೆ ಕಂಡು ಬಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರವಿ ಎಸ್. ತಿಳಿಸಿದ್ದಾರೆ.</p>.<p>ಲಘು ಪೋಷಕಾಂಶ ಕೊರತೆಯಿಂದ ಕಬ್ಬಿನ ಚಿಗುರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮರಿಗಳ ಸಂಖ್ಯೆ ಕಡಿಮೆ ಆಗಿ ಶೇ 10 ರಿಂದ ಶೇ 15 ರಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.</p>.<p>ಕಬ್ಬಿಣ ಅಂಶವು ಸಸ್ಯಗಳಲ್ಲಿ ಚಲಿಸುವುದಿಲ್ಲ. ಕಬ್ಬಿನ ಎಲೆಗಳಲ್ಲಿ ಲಘು ಪೋಷಕಾಂಶ ಕೊರತೆ ಹೆಚ್ಚಾದಂತೆ ನರಗಳ ಮಧ್ಯಭಾಗ ಹಳದಿಯಾಗುತ್ತವೆ. ದೂರದಿಂದ ನೋಡಿದರೆ ಬಿಳಿ, ಬಿಳಿ ಬಣ್ಣದಂತೆ ಕಾಣುತ್ತವೆ. ಬೇರುಗಳ ಬೆಳವಣಿಗೆ ಸರಿಯಾಗಿ ಆಗದ ಕಾರಣ ಪೋಷಕಾಂಶ ಹೀರಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.</p>.<p>ಲಘು ಪೋಷಕಾಂಶ ಕೊರತೆಯು ಹೆಚ್ಚಾಗಿ ಸುಣ್ಣದ ಅಂಶ ಅಧಿಕವಾಗಿರುವ, ಕ್ಷಾರ ಭೂಮಿ (ಮಣ್ಣಿನ ರಸಸಾರ ಹೆಚ್ಚು ಇರುವ ಭೂಮಿ), ಸಾವಯವ ಅಂಶ ಕಡಿಮೆ ಇರುವ ಭೂಮಿ ಹಾಗೂ ನೀರು ಹೆಚ್ಚಾಗಿ ಬಸಿದು ಹೋಗದಿರುವ ಮಣ್ಣಿನಲ್ಲಿ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.</p>.<p>ಲಘು ಪೋಷಕಾಂಶ ಕೊರತೆ ನಿರ್ವಹಣೆಗೆ ಪ್ರತಿ ಎಕರೆ ಜಮೀನಿಗೆ 10 ಕೆ.ಜಿ. ಕಬ್ಬಿಣದ ಸಲ್ಫೇಟ್, 25 ಕೆ.ಜಿ. ಎರೆಗೊಬ್ಬರ ಅಥವಾ ತಿಪ್ಪೆ ಗೊಬ್ಬರ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು. ಅಥವಾ ಶೇ 0.25-0.5 ರ ಕಬ್ಬಿಣದ ಸಲ್ಫೇಟ್ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಬೇಕು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ: </strong>ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಕಬ್ಬು ಕಟಾವು ಆದ ಜಮೀನುಗಳಲ್ಲಿ ಲಘು ಪೋಷಕಾಂಶ ಕೊರತೆ ಕಂಡು ಬಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರವಿ ಎಸ್. ತಿಳಿಸಿದ್ದಾರೆ.</p>.<p>ಲಘು ಪೋಷಕಾಂಶ ಕೊರತೆಯಿಂದ ಕಬ್ಬಿನ ಚಿಗುರು ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮರಿಗಳ ಸಂಖ್ಯೆ ಕಡಿಮೆ ಆಗಿ ಶೇ 10 ರಿಂದ ಶೇ 15 ರಷ್ಟು ಇಳುವರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.</p>.<p>ಕಬ್ಬಿಣ ಅಂಶವು ಸಸ್ಯಗಳಲ್ಲಿ ಚಲಿಸುವುದಿಲ್ಲ. ಕಬ್ಬಿನ ಎಲೆಗಳಲ್ಲಿ ಲಘು ಪೋಷಕಾಂಶ ಕೊರತೆ ಹೆಚ್ಚಾದಂತೆ ನರಗಳ ಮಧ್ಯಭಾಗ ಹಳದಿಯಾಗುತ್ತವೆ. ದೂರದಿಂದ ನೋಡಿದರೆ ಬಿಳಿ, ಬಿಳಿ ಬಣ್ಣದಂತೆ ಕಾಣುತ್ತವೆ. ಬೇರುಗಳ ಬೆಳವಣಿಗೆ ಸರಿಯಾಗಿ ಆಗದ ಕಾರಣ ಪೋಷಕಾಂಶ ಹೀರಿಕೊಳ್ಳಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.</p>.<p>ಲಘು ಪೋಷಕಾಂಶ ಕೊರತೆಯು ಹೆಚ್ಚಾಗಿ ಸುಣ್ಣದ ಅಂಶ ಅಧಿಕವಾಗಿರುವ, ಕ್ಷಾರ ಭೂಮಿ (ಮಣ್ಣಿನ ರಸಸಾರ ಹೆಚ್ಚು ಇರುವ ಭೂಮಿ), ಸಾವಯವ ಅಂಶ ಕಡಿಮೆ ಇರುವ ಭೂಮಿ ಹಾಗೂ ನೀರು ಹೆಚ್ಚಾಗಿ ಬಸಿದು ಹೋಗದಿರುವ ಮಣ್ಣಿನಲ್ಲಿ ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.</p>.<p>ಲಘು ಪೋಷಕಾಂಶ ಕೊರತೆ ನಿರ್ವಹಣೆಗೆ ಪ್ರತಿ ಎಕರೆ ಜಮೀನಿಗೆ 10 ಕೆ.ಜಿ. ಕಬ್ಬಿಣದ ಸಲ್ಫೇಟ್, 25 ಕೆ.ಜಿ. ಎರೆಗೊಬ್ಬರ ಅಥವಾ ತಿಪ್ಪೆ ಗೊಬ್ಬರ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು. ಅಥವಾ ಶೇ 0.25-0.5 ರ ಕಬ್ಬಿಣದ ಸಲ್ಫೇಟ್ ದ್ರಾವಣವನ್ನು ಎಲೆಗಳಿಗೆ ಸಿಂಪಡಿಸಬೇಕು ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>