<p><strong>ಬೀದರ್</strong>: ‘ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಹೆಚ್ಚು ಹರಟೆ ಹೊಡೆದು ಸಮಯ ವ್ಯರ್ಥ ಮಾಡಿಕೊಳ್ಳಬಾರದು’ ಎಂದು ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯೆ ರಂಜನಾ ಪಾಟೀಲ ತಿಳಿಸಿದರು.</p>.<p>ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯರಿಗೆ ನಗರದ ಅಕ್ಕಮಹಾದೇವಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.</p>.<p>ಸಮಯಪಾಲನೆ, ಶಿಸ್ತು ಮತ್ತು ಸಂಯಮ ಈ ಮೂರು ವಿದ್ಯಾರ್ಥಿಗಳಲ್ಲಿರಬೇಕು. ಕಾಲೇಜು, ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ಪ್ರೀತಿಯಿಂದ ಕಂಡಾಗ ಅಧ್ಯಯನ ಪರಿಪೂರ್ಣವಾಗುತ್ತದೆ. ಅನವಶ್ಯಕ ವಿಷಯಗಳನ್ನು ತಲೆಗೆ ಹಾಕಿಕೊಂಡು ಜೀವನಕ್ಕೆ ವಿಮುಖರಾಗಿ ಬದುಕಬಾರದು. ಏನಾದರೂ ಹೊಸದನ್ನು ಸಾಧಿಸಿ ತೋರಿಸುವ ಛಲ ಮತ್ತು ಗುರಿ ಇಟ್ಟುಕೊಂಡರೆ ವಿದ್ಯಾರ್ಥಿಗಳು ಸಾಧನೆಯ ಉತ್ತುಂಗ ಶಿಖರಕ್ಕೇರುತ್ತಾರೆ ಎಂದರು.</p>.<p>ವಿಜ್ಞಾನ ವಿಭಾಗದ ರಾಧಿಕಾ ಸಂಜೀವಕುಮಾರ (ಶೇ 89.66), ವಿಜಯಲಕ್ಷ್ಮಿ ಗೋರಕ (ಶೇ 89), ಕಲಾ ವಿಭಾಗದ ವಿಜಯಲಕ್ಷ್ಮಿ ಎ. (ಶೇ 85.66) ಕ್ರಮವಾಗಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಕ್ಕೆ ಸನ್ಮಾನಿಸಲಾಯಿತು. </p>.<p>ಪ್ರಾಧ್ಯಾಪಕರಾದ ಪ್ರಶೀಲಾ, ಅಂಬಿಕಾ, ಧನಲಕ್ಷ್ಮಿ ಪಾಟೀಲ, ಶಿವರಂಜನಾ, ಕವಿತಾ ಪಟವಾದಿ, ಅಂಬಿಕಾ ಸಜ್ಜನಶೆಟ್ಟಿ, ಮೀನಾಕ್ಷಿ ಚಿಕ್ಕಪೇಟೆ, ಗೀತಾ ಸಂತೋಷ, ಲಕ್ಷ್ಮಣ ಬೇಂದ್ರೆ, ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ‘ವಿದ್ಯಾರ್ಥಿಗಳು ಮೊಬೈಲ್ನಲ್ಲಿ ಹೆಚ್ಚು ಹರಟೆ ಹೊಡೆದು ಸಮಯ ವ್ಯರ್ಥ ಮಾಡಿಕೊಳ್ಳಬಾರದು’ ಎಂದು ಅಕ್ಕಮಹಾದೇವಿ ಮಹಿಳಾ ಕಾಲೇಜಿನ ಪ್ರಾಚಾರ್ಯೆ ರಂಜನಾ ಪಾಟೀಲ ತಿಳಿಸಿದರು.</p>.<p>ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ ವಿದ್ಯಾರ್ಥಿನಿಯರಿಗೆ ನಗರದ ಅಕ್ಕಮಹಾದೇವಿ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.</p>.<p>ಸಮಯಪಾಲನೆ, ಶಿಸ್ತು ಮತ್ತು ಸಂಯಮ ಈ ಮೂರು ವಿದ್ಯಾರ್ಥಿಗಳಲ್ಲಿರಬೇಕು. ಕಾಲೇಜು, ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ಪ್ರೀತಿಯಿಂದ ಕಂಡಾಗ ಅಧ್ಯಯನ ಪರಿಪೂರ್ಣವಾಗುತ್ತದೆ. ಅನವಶ್ಯಕ ವಿಷಯಗಳನ್ನು ತಲೆಗೆ ಹಾಕಿಕೊಂಡು ಜೀವನಕ್ಕೆ ವಿಮುಖರಾಗಿ ಬದುಕಬಾರದು. ಏನಾದರೂ ಹೊಸದನ್ನು ಸಾಧಿಸಿ ತೋರಿಸುವ ಛಲ ಮತ್ತು ಗುರಿ ಇಟ್ಟುಕೊಂಡರೆ ವಿದ್ಯಾರ್ಥಿಗಳು ಸಾಧನೆಯ ಉತ್ತುಂಗ ಶಿಖರಕ್ಕೇರುತ್ತಾರೆ ಎಂದರು.</p>.<p>ವಿಜ್ಞಾನ ವಿಭಾಗದ ರಾಧಿಕಾ ಸಂಜೀವಕುಮಾರ (ಶೇ 89.66), ವಿಜಯಲಕ್ಷ್ಮಿ ಗೋರಕ (ಶೇ 89), ಕಲಾ ವಿಭಾಗದ ವಿಜಯಲಕ್ಷ್ಮಿ ಎ. (ಶೇ 85.66) ಕ್ರಮವಾಗಿ ಕಾಲೇಜಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಕ್ಕೆ ಸನ್ಮಾನಿಸಲಾಯಿತು. </p>.<p>ಪ್ರಾಧ್ಯಾಪಕರಾದ ಪ್ರಶೀಲಾ, ಅಂಬಿಕಾ, ಧನಲಕ್ಷ್ಮಿ ಪಾಟೀಲ, ಶಿವರಂಜನಾ, ಕವಿತಾ ಪಟವಾದಿ, ಅಂಬಿಕಾ ಸಜ್ಜನಶೆಟ್ಟಿ, ಮೀನಾಕ್ಷಿ ಚಿಕ್ಕಪೇಟೆ, ಗೀತಾ ಸಂತೋಷ, ಲಕ್ಷ್ಮಣ ಬೇಂದ್ರೆ, ಸಿಬ್ಬಂದಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>