‘ನಮ್ಮ ಓಣಿಯಲ್ಲಿ ಈಚೆಗೆ ಕೊರೆದ ಕೊಳವೆಬಾವಿಗೆ ಸ್ವಲ್ಪಮಟ್ಟಿಗೆ ನೀರು ಇದೆ. ಆದರೆ ಮೋಟರ್ ಅಳವಡಿಸಿಲ್ಲ. ಮನೆ-ಮನೆಗೆ ನಳಗಳ ವ್ಯವಸ್ಥೆ ಇದ್ದರೂ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಇದರಿಂದ ದನ-ಕರುಗಳಿಗೆ, ನಿತ್ಯದ ಕಾರ್ಯಗಳಿಗೆ ಅಗತ್ಯವಾಗಿರುವ ನೀರನ್ನು ತರಲು ಅರ್ಧ ಕಿ.ಮೀ ದೂರದ ಮಲ್ಲಪ್ಪ ಗೌಡರ ಹೊಲಕ್ಕೆ ಹೋಗಿ ನೀರು ತರಬೇಕಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ವಾಟರ್ ಮ್ಯಾನ್ಗೆ ಹೇಳಿದರೆ ಬೇಜವಬ್ದಾರಿಯಿಂದ ಉತ್ತರ ನೀಡುತ್ತಾರೆ. ಇತರ ಓಣಿಗಳಂತೆ ಸಮ ಪ್ರಮಾಣದಲ್ಲಿ ನೀರು ಹರಿಸುವುದಿಲ್ಲ’ ಎಂದು ಲಲಿತಾಬಾಯಿ, ಮೋಹಿತಾ, ರೇಣುಕಾ, ಸತೀಶ ಅಸಮಾಧಾನ ಹೊರ ಹಾಕುತ್ತಾರೆ.