ಉಪನ್ಯಾಸಕ ನೀಲಕಂಠ ಇಸ್ಲಾಮಪುರ್ ಮಾತನಾಡಿ,‘ಬತ್ತಿ, ಪ್ರಣತೆ, ತೈಲ ಎಲ್ಲವೂ ಇದ್ದಾಗಲೂ ಜ್ಯೋತಿ ಬೆಳಗಿಸಲು ಚಾಲನಾ ಶಕ್ತಿ ಬೇಕಾಗುವಂತೆ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣಕ್ಕೆ ವಿದ್ಯಾಮಂದಿರಗಳ ಅವಶ್ಯಕತೆ ಇದೆ. ಬದುಕಿನಲ್ಲಿ ಯಶಸ್ಸು ಕಾಣಲು ನಿರಂತರ ಶ್ರಮ ವಹಿಸಬೇಕಾಗುತ್ತದೆ. ನಂದಿನಿ ವಿದ್ಯಾಲಯದಲ್ಲಿ ಬೆಳೆಯುತ್ತಿರುವ ಮಕ್ಕಳು ಭಾಗ್ಯಶಾಲಿಗಳಾಗಿ ಉತ್ತಮ ಶಿಕ್ಷಣ, ಸಂಸ್ಕಾರ ಕಲಿತು, ಸಂಸ್ಥೆಗೆ ಕೀರ್ತಿ ತರಬೇಕು’ ಎಂದು ಹೇಳಿದರು.