<p><strong>ಬಸವಕಲ್ಯಾಣ</strong>: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗಾಗಿ ಕಿರಿಯ ಎಂಜಿನಿಯರ್ ಕೇಳಿದ ಲಂಚವನ್ನು ಕೊಡಲು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ತಾಲ್ಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ಎರಡು ಎತ್ತುಗಳನ್ನು ತಂದರು.</p>.<p>‘ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಸಾಲಿನಲ್ಲಿ ನನ್ನ ಹೊಲದಲ್ಲಿ ನಾಲೆಗೆ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕಾಗಿ ₹ 1 ಲಕ್ಷ ಮಂಜೂರು ಆಗಿತ್ತು. ಕೂಲಿ ಹಣದ ರೂಪದಲ್ಲಿ ₹ 55 ಸಾವಿರ ಪಾವತಿಯಾಗಿದ್ದು, ಇನ್ನುಳಿದ ₹ 45 ಸಾವಿರ ಸಾಮಗ್ರಿ ಖರೀದಿ ಹಣ ನೀಡಿರಲಿಲ್ಲ. ಅದರ ಪಾವತಿಗೆ ₹ 5 ಸಾವಿರ ಲಂಚದ ಕೇಳಲಾಗಿತ್ತು. ಹಣವಿಲ್ಲದ ಕಾರಣ ಎತ್ತುಗಳನ್ನು ತಂದೆ’ ಎಂದು ರೈತ ಪ್ರಶಾಂತ ಬಿರಾದಾರ ತಿಳಿಸಿದರು.</p>.<p> ‘ರೈತನಿಗೆ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಕಿರಿಯ ಎಂಜಿನಿಯರ್ ಯಾರು ಎಂಬುದನ್ನು ರೈತ ಸ್ಪಷ್ಟವಾಗಿ ಹೇಳುತ್ತಿಲ್ಲ. 2019ರಲ್ಲಿ ಕಾಮಗಾರಿ ಆರಂಭವಾದಾಗ, ಆ ಹುದ್ದೆಯಲ್ಲಿ ಬೇರೆಯವರು ಇದ್ದರು.ಈಗ ಸೂರ್ಯಕಾಂತ ಎಂಬುವರು ಇದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ ಚವಾಣ್ ತಿಳಿಸಿದ್ದಾರೆ.</p>.<p>‘ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಹಾಯಕ ಸೂರ್ಯಕಾಂತ ಪಾಟೀಲಗೆ ಸೇವೆಯಿಂದ ವಜಾಗೊಳಿಸಿ. ಹೊರ ಗುತ್ತಿಗೆ ಸೇವೆ ರದ್ದುಪಡಿಸಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ</strong>: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿಗಾಗಿ ಕಿರಿಯ ಎಂಜಿನಿಯರ್ ಕೇಳಿದ ಲಂಚವನ್ನು ಕೊಡಲು ಸೋಮವಾರ ತಾಲ್ಲೂಕು ಪಂಚಾಯಿತಿ ಕಚೇರಿಗೆ ತಾಲ್ಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ ಎರಡು ಎತ್ತುಗಳನ್ನು ತಂದರು.</p>.<p>‘ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಸಾಲಿನಲ್ಲಿ ನನ್ನ ಹೊಲದಲ್ಲಿ ನಾಲೆಗೆ ತಡೆಗೋಡೆ ನಿರ್ಮಿಸಲಾಗಿದೆ. ಇದಕ್ಕಾಗಿ ₹ 1 ಲಕ್ಷ ಮಂಜೂರು ಆಗಿತ್ತು. ಕೂಲಿ ಹಣದ ರೂಪದಲ್ಲಿ ₹ 55 ಸಾವಿರ ಪಾವತಿಯಾಗಿದ್ದು, ಇನ್ನುಳಿದ ₹ 45 ಸಾವಿರ ಸಾಮಗ್ರಿ ಖರೀದಿ ಹಣ ನೀಡಿರಲಿಲ್ಲ. ಅದರ ಪಾವತಿಗೆ ₹ 5 ಸಾವಿರ ಲಂಚದ ಕೇಳಲಾಗಿತ್ತು. ಹಣವಿಲ್ಲದ ಕಾರಣ ಎತ್ತುಗಳನ್ನು ತಂದೆ’ ಎಂದು ರೈತ ಪ್ರಶಾಂತ ಬಿರಾದಾರ ತಿಳಿಸಿದರು.</p>.<p> ‘ರೈತನಿಗೆ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಆದರೆ, ಕಿರಿಯ ಎಂಜಿನಿಯರ್ ಯಾರು ಎಂಬುದನ್ನು ರೈತ ಸ್ಪಷ್ಟವಾಗಿ ಹೇಳುತ್ತಿಲ್ಲ. 2019ರಲ್ಲಿ ಕಾಮಗಾರಿ ಆರಂಭವಾದಾಗ, ಆ ಹುದ್ದೆಯಲ್ಲಿ ಬೇರೆಯವರು ಇದ್ದರು.ಈಗ ಸೂರ್ಯಕಾಂತ ಎಂಬುವರು ಇದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇನೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಸಂತೋಷ ಚವಾಣ್ ತಿಳಿಸಿದ್ದಾರೆ.</p>.<p>‘ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಬಸವಕಲ್ಯಾಣ ತಾಲ್ಲೂಕು ಪಂಚಾಯಿತಿ ತಾಂತ್ರಿಕ ಸಹಾಯಕ ಸೂರ್ಯಕಾಂತ ಪಾಟೀಲಗೆ ಸೇವೆಯಿಂದ ವಜಾಗೊಳಿಸಿ. ಹೊರ ಗುತ್ತಿಗೆ ಸೇವೆ ರದ್ದುಪಡಿಸಿ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>