ಲಿಂಗಾಯತ ಸಮುದಾಯದ ಮಾಜಿ ಸಚಿವರಾದ ಬಸವರಾಜ ಪಾಟೀಲ ಹುಮನಾಬಾದ್, ಈಶ್ವರ ಖಂಡ್ರೆ, ಮುಖಂಡ ಮಡಿವಾಳಪ್ಪ ಕಾರಬಾರಿ, ಬಸವರಾಜ ಬುಳ್ಳಾ, ವಿ.ಕೆ. ಪಾಟೀಲ, ಬಸವರಾಜ ಜಾಬಶೆಟ್ಟಿ, ಮರಾಠಾ ಸಮುದಾಯದ ಗೋಪಾಲರಾವ್ ಮುಡಬಿ, ಬ್ರಾಹ್ಮಣ ಸಮುದಾಯದ ಶ್ರೀನಿವಾಸರಾವ್ ಕಾಶೆಂಪೂರ, ಕುರುಬ ಸಮುದಾಯದ ಮಾಣಿಕರಾವ್ ಫುಲೇಕರ್, ವೈಶ್ಯ (ಕೋಮಟಿ) ಸಮುದಾಯದ ಚಂದ್ರಕಾಂತ ಸಿಂದೋಲ್, ಗಾಣಿಗ ಸಮುದಾಯದ ಸಿದ್ದಪ್ಪ ಖೇಳಗಿ, ಪರಿಶಿಷ್ಟ ಜಾತಿ(ಬಲಗೈ)ಯ ಕೆ. ಪುಂಡಲೀಕರಾವ್ (ಪ್ರಭಾರ) ಹಾಗೂ ಅಲ್ಪಸಂಖ್ಯಾತ ಸಮುದಾಯದ ಕಾಜಿ ಅರಶದ್ ಅಲಿ ಅವರು ಈವರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.