ಬಸವಕಲ್ಯಾಣ: ಸತತವಾಗಿ ಮಳೆ ಸುರಿಯುತ್ತಿರುವ ಕಾರಣ ಕೆಲ ಗ್ರಾಮಗಳಲ್ಲಿನ ಮನೆಗಳ ಚಾವಣಿ ಹಾಗೂ ಗೋಡೆ ಕುಸಿದಿವೆ.
ಅತ್ಲಾಪುರ ಗ್ರಾಮದ ಮಹಾನಂದ ಪಂಚಾಳ ಅವರ ಮನೆಯ ಚಾವಣಿ ಕುಸಿದಿದೆ. ಇವರಿಗೆ ವಾಸಕ್ಕೆ ಇದೊಂದೇ ಕೊಠಡಿ ಇದೆ. ಆದ್ದರಿಂದ ಚಾವಣಿ ಕುಸಿದ ಕಾರಣ ತೊಂದರೆಯಲ್ಲಿದ್ದಾರೆ. ಈ ಕಾರಣ ಸಂಬಂಧಿತರು ಪರಿಹಾರ ಧನ ನೀಡಬೇಕು ಹಾಗೂ ಮನೆ ಮಂಜೂರು ಮಾಡಬೇಕು ಎಂದು ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅನಿಲ ಮರ್ಪಳ್ಳೆ ಆಗ್ರಹಿಸಿದ್ದಾರೆ.
ನಾರಾಯಣಪುರ, ಉಜಳಂಬ, ಮಂಠಾಳಗಳಲ್ಲಿ ಮನೆ ಗೋಡೆಗಳ ಕಲ್ಲುಗಳು ಕುಸಿದಿರುವ ಬಗ್ಗೆ ತಿಳಿದು ಬಂದಿದೆ. ಪ್ರತಾಪುರ, ಮೋರಖಂಡಿ, ಕೊಹಿನೂರ ರಸ್ತೆಗಳಲ್ಲಿ ಮಳೆ ನೀರಿನಿಂದ ತಗ್ಗುಗುಂಡಿಗಳು ಬಿದ್ದಿವೆ.