<p><strong>ಹುಲಸೂರ:</strong> ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಅಟಲ್ ಜನಸ್ನೇಹಿ ಕಚೇರಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಸಿಬ್ಬಂದಿಯು ಆತಂಕದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.</p>.<p>ತಾಲ್ಲೂಕು ದಂಡಾಧಿಕಾರಿ ಕಚೇರಿ ನಂತರ ಅತಿ ಹೆಚ್ಚು ಜನರು ಭೇಟಿ ಕೊಡುವ ನಾಡ ಕಚೇರಿಯನ್ನು ತಾಲ್ಲೂಕು ಘೋಷಣೆ ಬಳಿಕ ಪ್ರವಾಸಿ ಮಂದಿರದಲ್ಲಿ ಆರಂಭಿಸಲಾಗಿತ್ತು. ಆದರೆ, ತೀರಾ ಹಳೆಯದಾಗಿದ್ದು, ಕಟ್ಟಡ ಕುಸಿಯುವ ಹಂತದಲ್ಲಿದೆ.</p>.<p>ಕಟ್ಟಡದ ಚಾವಣಿ ಸಂಪೂರ್ಣವಾಗಿ ಉದುರಿ ಹೋಗಿದ್ದು, ಕಬ್ಬಿಣದ ಸರಳುಗಳು ಅಸ್ಥಿ-ಪಂಜರದಂತೆ ತೇಲಿಕೊಂಡಿವೆ. ಎಲ್ಲ ಗೋಡೆಗಳು ಬಿರುಕುಬಿಟ್ಟಿದ್ದು, ಬೀಳುವ ಸ್ಥಿತಿಯಲ್ಲಿವೆ. ಕಟ್ಟಡದ ಮೇಲೆ ನಾನಾ ಬಗೆಯ ಗಿಡಮರ ಬೆಳೆದಿವೆ.</p>.<p>ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರು ಕಚೇರಿ ವ್ಯವಹಾರಗಳಿಗಾಗಿ ಈ ಕಟ್ಟಡವನ್ನು ಬಳಸುತ್ತಿದ್ದರೂ ಚಾವಣಿ ಸಿಮೆಂಟ್ ಹಾಗೂ ಮರಳು ಸದಾ ಕೆಳಗೆ ಉದುರುತ್ತಿದೆ. ಕಚೇರಿ ಒಳಗಿನ ನೆಲಹಾಸಿಗೆ ಸಿಮೆಂಟ್ ಹಾಕಲಾಗಿತ್ತಾದರೂ ಇಡೀ ಸಿಮೆಂಟ್ ಎದ್ದು ಗುಂಡಿಮಯವಾಗಿದೆ. ಕಚೇರಿ ಒಳಗೆ ಆಸನ ಹಾಕಲೂ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. </p>.<p>ಕಾಂಪೌಂಡ್ ಕಬ್ಬಿಣದ ಗೇಟ್ ಬಿಟ್ಟರೆ ಉಳಿದ ಇಡೀ ಕಾಂಪೌಂಡ್ ಸೀಳಿಕೊಂಡು, ಸಿಮೆಂಟ್ ಉದುರಿ ಬೀಳುವ ಹಂತಕ್ಕೆ ತಲುಪಿದೆ. ಕಾಂಪೌಂಡ್ ಒಳಗೆ ಪೊದೆಗಳಂತೆ ಗಿಡಗಂಟಿ ಬೆಳೆದಿದೆ. ಹಾವು ಮತ್ತು ಇತರ ವಿಷಜಂತುಗಳ ತಾಣವಾಗಿದೆ.</p>.<p>‘ಕಟ್ಟಡ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಕಚೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಲಸೂರನಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡವನ್ನು ನೂತನವಾಗಿ ನಿರ್ಮಿಸಿದರೆ ಗ್ರಾಮದ ಅಭಿವೃದ್ಧಿಗೂ ನೆರವಾಗಲಿದೆ’ ಎಂದು ಗ್ರಾಮಸ್ಥ ನಾಗೇಶ ಮೇತ್ರೆ ತಿಳಿಸಿದರು.</p>.<p>‘ಕಟ್ಟಡದ ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಇನ್ನೂ ಅನುದಾನ ಸಿಕ್ಕಿಲ್ಲ. ಮುಂದೆ ಪರಿಶೀಲಿಸಿ, ಕಟ್ಟಡದ ಕುರಿತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಕಂದಾಯ ಅಧಿಕಾರಿಗಳು ತಿಳಿಸಿದರು.</p>.<div><blockquote>ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಅವರು ಕಟ್ಟಡದಲ್ಲಿನ ಸಣ್ಣಪುಟ್ಟ ದುರಸ್ತಿ ಕಾರ್ಯ ಕೂಡಲೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.. </blockquote><span class="attribution">–ಶಿವಾನಂದ ಮೇತ್ರೆ, ಹುಲಸೂರ ತಹಶೀಲ್ದಾರ್</span></div>.<div><blockquote>ಇಲ್ಲಿನ ನಾಡಕಚೇರಿ ಶಿಥಿಲಗೊಂಡಿದ್ದು ಮೂಲಸೌಕರ್ಯವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿತಪಿಸುವಂತಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯ ಶೌಚಾಲಯವಿಲ್ಲ. </blockquote><span class="attribution">–ಅಜಿತ್ ಸೂರ್ಯವಂಶಿ, ಲಹೂಜಿ ಶಕ್ತಿ ಸೇನೆ ತಾಲ್ಲೂಕು ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ಪಟ್ಟಣದ ಪ್ರವಾಸಿ ಮಂದಿರದಲ್ಲಿರುವ ಅಟಲ್ ಜನಸ್ನೇಹಿ ಕಚೇರಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಸಿಬ್ಬಂದಿಯು ಆತಂಕದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.</p>.<p>ತಾಲ್ಲೂಕು ದಂಡಾಧಿಕಾರಿ ಕಚೇರಿ ನಂತರ ಅತಿ ಹೆಚ್ಚು ಜನರು ಭೇಟಿ ಕೊಡುವ ನಾಡ ಕಚೇರಿಯನ್ನು ತಾಲ್ಲೂಕು ಘೋಷಣೆ ಬಳಿಕ ಪ್ರವಾಸಿ ಮಂದಿರದಲ್ಲಿ ಆರಂಭಿಸಲಾಗಿತ್ತು. ಆದರೆ, ತೀರಾ ಹಳೆಯದಾಗಿದ್ದು, ಕಟ್ಟಡ ಕುಸಿಯುವ ಹಂತದಲ್ಲಿದೆ.</p>.<p>ಕಟ್ಟಡದ ಚಾವಣಿ ಸಂಪೂರ್ಣವಾಗಿ ಉದುರಿ ಹೋಗಿದ್ದು, ಕಬ್ಬಿಣದ ಸರಳುಗಳು ಅಸ್ಥಿ-ಪಂಜರದಂತೆ ತೇಲಿಕೊಂಡಿವೆ. ಎಲ್ಲ ಗೋಡೆಗಳು ಬಿರುಕುಬಿಟ್ಟಿದ್ದು, ಬೀಳುವ ಸ್ಥಿತಿಯಲ್ಲಿವೆ. ಕಟ್ಟಡದ ಮೇಲೆ ನಾನಾ ಬಗೆಯ ಗಿಡಮರ ಬೆಳೆದಿವೆ.</p>.<p>ಗ್ರಾಮ ಲೆಕ್ಕಾಧಿಕಾರಿ ಹಾಗೂ ಸಹಾಯಕರು ಕಚೇರಿ ವ್ಯವಹಾರಗಳಿಗಾಗಿ ಈ ಕಟ್ಟಡವನ್ನು ಬಳಸುತ್ತಿದ್ದರೂ ಚಾವಣಿ ಸಿಮೆಂಟ್ ಹಾಗೂ ಮರಳು ಸದಾ ಕೆಳಗೆ ಉದುರುತ್ತಿದೆ. ಕಚೇರಿ ಒಳಗಿನ ನೆಲಹಾಸಿಗೆ ಸಿಮೆಂಟ್ ಹಾಕಲಾಗಿತ್ತಾದರೂ ಇಡೀ ಸಿಮೆಂಟ್ ಎದ್ದು ಗುಂಡಿಮಯವಾಗಿದೆ. ಕಚೇರಿ ಒಳಗೆ ಆಸನ ಹಾಕಲೂ ಆಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. </p>.<p>ಕಾಂಪೌಂಡ್ ಕಬ್ಬಿಣದ ಗೇಟ್ ಬಿಟ್ಟರೆ ಉಳಿದ ಇಡೀ ಕಾಂಪೌಂಡ್ ಸೀಳಿಕೊಂಡು, ಸಿಮೆಂಟ್ ಉದುರಿ ಬೀಳುವ ಹಂತಕ್ಕೆ ತಲುಪಿದೆ. ಕಾಂಪೌಂಡ್ ಒಳಗೆ ಪೊದೆಗಳಂತೆ ಗಿಡಗಂಟಿ ಬೆಳೆದಿದೆ. ಹಾವು ಮತ್ತು ಇತರ ವಿಷಜಂತುಗಳ ತಾಣವಾಗಿದೆ.</p>.<p>‘ಕಟ್ಟಡ ನಿರ್ಮಾಣವಾಗಿ ದಶಕಗಳೇ ಕಳೆದಿವೆ. ಕಚೇರಿಯನ್ನು ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹುಲಸೂರನಲ್ಲಿ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಕಟ್ಟಡವನ್ನು ನೂತನವಾಗಿ ನಿರ್ಮಿಸಿದರೆ ಗ್ರಾಮದ ಅಭಿವೃದ್ಧಿಗೂ ನೆರವಾಗಲಿದೆ’ ಎಂದು ಗ್ರಾಮಸ್ಥ ನಾಗೇಶ ಮೇತ್ರೆ ತಿಳಿಸಿದರು.</p>.<p>‘ಕಟ್ಟಡದ ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಇನ್ನೂ ಅನುದಾನ ಸಿಕ್ಕಿಲ್ಲ. ಮುಂದೆ ಪರಿಶೀಲಿಸಿ, ಕಟ್ಟಡದ ಕುರಿತು ಕ್ರಮಕ್ಕೆ ಮೇಲಧಿಕಾರಿಗಳಿಗೆ ಮನವಿ ಮಾಡಲಾಗುವುದು’ ಎಂದು ಕಂದಾಯ ಅಧಿಕಾರಿಗಳು ತಿಳಿಸಿದರು.</p>.<div><blockquote>ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೇನೆ. ಅವರು ಕಟ್ಟಡದಲ್ಲಿನ ಸಣ್ಣಪುಟ್ಟ ದುರಸ್ತಿ ಕಾರ್ಯ ಕೂಡಲೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.. </blockquote><span class="attribution">–ಶಿವಾನಂದ ಮೇತ್ರೆ, ಹುಲಸೂರ ತಹಶೀಲ್ದಾರ್</span></div>.<div><blockquote>ಇಲ್ಲಿನ ನಾಡಕಚೇರಿ ಶಿಥಿಲಗೊಂಡಿದ್ದು ಮೂಲಸೌಕರ್ಯವಿಲ್ಲದೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿತಪಿಸುವಂತಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯ ಶೌಚಾಲಯವಿಲ್ಲ. </blockquote><span class="attribution">–ಅಜಿತ್ ಸೂರ್ಯವಂಶಿ, ಲಹೂಜಿ ಶಕ್ತಿ ಸೇನೆ ತಾಲ್ಲೂಕು ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>