<p><strong>ಜನವಾಡ:</strong> ರೋಟರಿ ಕ್ಲಬ್ ಬೀದರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಬಸವ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಶಿಬಿರದಲ್ಲಿ 425 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.</p>.<p>ದಂತ, ನೇತ್ರ, ಎಲುಬು, ನರ, ಕಿವಿ, ಮೂಗು, ಗಂಟಲು, ಹೃದಯ ಮೊದಲಾದ ರೋಗಗಳ ತಪಾಸಣೆ ನಡೆಸಿ, ಔಷಧ ವಿತರಿಸಲಾಯಿತು. ಇಸಿಜಿ, ಟೂಡಿ, ರಕ್ತದೊತ್ತಡ, ಮಧುಮೇಹ, ರಕ್ತ ಪರೀಕ್ಷೆಗಳನ್ನು ಸಹ ಉಚಿತವಾಗಿ ನಡೆಸಲಾಯಿತು. ನೇತ್ರ ಸಮಸ್ಯೆ ಹೊಂದಿದ ಐವರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು.</p>.<p>ಡಾ.ವಿ.ವಿ.ನಾಗರಾಜ, ಡಾ.ಸಿದ್ಧಲಿಂಗೇಶ್ವರ ಎ. ಮಠಪತಿ, ಡಾ.ರಾಜಶೇಖರ ಸೇಡಂಕರ್, ಡಾ.ನಿತಿನ್ ಗುದಗೆ, ಡಾ.ಶಿವಕುಮಾರ ಪಾಟೀಲ, ಡಾ.ಪ್ರಶಾಂತ ಪಾಟೀಲ, ಡಾ.ಸುಪ್ರಿಯಾ ಕೋಡಗೆ ಪಾಟೀಲ, ಡಾ.ಪರಮೇಶ್ವರ ಬಿರಾದಾರ, ಡಾ.ವಿನಾಯಕ ಜ್ಯಾಂತೆ, ಡಾ.ಬಸವಪ್ರಸಾದ್ ಪಾಟೀಲ, ಎಸ್.ಬಿ.ಪಾಟೀಲ ದಂತ ಆಸ್ಪತ್ರೆ, ಮೇಗೂರ್ ಐ ಕೇರ್ ಆಸ್ಪತ್ರೆಯ ವೈದ್ಯರು ತಪಾಸಣೆ ಮಾಡಿದರು.</p>.<p>ಜನರಿಗೆ ನೆರವಾಗಲು ಶಿಬಿರ: ‘ಗ್ರಾಮೀಣ ಭಾಗದ ಜನರಿಗೆ ನೆರವಾಗಲು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಸೋಮಶೇಖರ ಪಾಟೀಲ ಹೇಳಿದರು.</p>.<p>ಬೀದರ್ ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಶಿಬಿರ ಉದ್ಘಾಟಿಸಿದರು. ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪಿಎಸ್ಐ ನಂದಿನಿ, ಕ್ಲಬ್ ಮಾಜಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಡಾ.ಸಿದ್ಧಲಿಂಗೇಶ್ವರ ಮಠಪತಿ, ಕೃಪಾಸಿಂಧು ಪಾಟೀಲ, ಅನಿಲ್ ಮಸೂದಿ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನವಾಡ:</strong> ರೋಟರಿ ಕ್ಲಬ್ ಬೀದರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಬಸವ ಪ್ರೌಢಶಾಲೆಯಲ್ಲಿ ಭಾನುವಾರ ನಡೆದ ಶಿಬಿರದಲ್ಲಿ 425 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.</p>.<p>ದಂತ, ನೇತ್ರ, ಎಲುಬು, ನರ, ಕಿವಿ, ಮೂಗು, ಗಂಟಲು, ಹೃದಯ ಮೊದಲಾದ ರೋಗಗಳ ತಪಾಸಣೆ ನಡೆಸಿ, ಔಷಧ ವಿತರಿಸಲಾಯಿತು. ಇಸಿಜಿ, ಟೂಡಿ, ರಕ್ತದೊತ್ತಡ, ಮಧುಮೇಹ, ರಕ್ತ ಪರೀಕ್ಷೆಗಳನ್ನು ಸಹ ಉಚಿತವಾಗಿ ನಡೆಸಲಾಯಿತು. ನೇತ್ರ ಸಮಸ್ಯೆ ಹೊಂದಿದ ಐವರಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು.</p>.<p>ಡಾ.ವಿ.ವಿ.ನಾಗರಾಜ, ಡಾ.ಸಿದ್ಧಲಿಂಗೇಶ್ವರ ಎ. ಮಠಪತಿ, ಡಾ.ರಾಜಶೇಖರ ಸೇಡಂಕರ್, ಡಾ.ನಿತಿನ್ ಗುದಗೆ, ಡಾ.ಶಿವಕುಮಾರ ಪಾಟೀಲ, ಡಾ.ಪ್ರಶಾಂತ ಪಾಟೀಲ, ಡಾ.ಸುಪ್ರಿಯಾ ಕೋಡಗೆ ಪಾಟೀಲ, ಡಾ.ಪರಮೇಶ್ವರ ಬಿರಾದಾರ, ಡಾ.ವಿನಾಯಕ ಜ್ಯಾಂತೆ, ಡಾ.ಬಸವಪ್ರಸಾದ್ ಪಾಟೀಲ, ಎಸ್.ಬಿ.ಪಾಟೀಲ ದಂತ ಆಸ್ಪತ್ರೆ, ಮೇಗೂರ್ ಐ ಕೇರ್ ಆಸ್ಪತ್ರೆಯ ವೈದ್ಯರು ತಪಾಸಣೆ ಮಾಡಿದರು.</p>.<p>ಜನರಿಗೆ ನೆರವಾಗಲು ಶಿಬಿರ: ‘ಗ್ರಾಮೀಣ ಭಾಗದ ಜನರಿಗೆ ನೆರವಾಗಲು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಸೋಮಶೇಖರ ಪಾಟೀಲ ಹೇಳಿದರು.</p>.<p>ಬೀದರ್ ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಶಿಬಿರ ಉದ್ಘಾಟಿಸಿದರು. ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಪಿಎಸ್ಐ ನಂದಿನಿ, ಕ್ಲಬ್ ಮಾಜಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಡಾ.ಸಿದ್ಧಲಿಂಗೇಶ್ವರ ಮಠಪತಿ, ಕೃಪಾಸಿಂಧು ಪಾಟೀಲ, ಅನಿಲ್ ಮಸೂದಿ ಹಾಜರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>