ಹುಮನಾಬಾದ್ (ಬೀದರ್ ಜಿಲ್ಲೆ):ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಕಿರಿಯ ಎಂಜಿನಿಯರ್ ವಿಜಯರೆಡ್ಡಿ ಅವರ ನಿರ್ಣಾ ಗ್ರಾಮದ ನಿವಾಸದಲ್ಲಿ ಒಂದು ಕೆಜಿ ಚಿನ್ನಾಭರಣ ಇರುವುದು ಎಸಿಬಿ ದಾಳಿಯಲ್ಲಿ ಪತ್ತೆಯಾಗಿದೆ.
‘750 ಗ್ರಾಂ ಬೆಳ್ಳಿ, 28 ಎಕರೆ ಜಮೀನು, ಹುಮನಾಬಾದ್ ಮತ್ತು ನಿರ್ಣಾದಲ್ಲಿ 4 ನಿವೇಶನ, 2 ಬೈಕ್, 1 ಕಾರು, ₹ 1.27 ಲಕ್ಷ ನಗದು ಹೀಗೆ ಒಟ್ಟಾರೆ ₹ 1.13 ಕೋಟಿ ಮೌಲ್ಯದ ಸ್ಥಿರಾಸ್ತಿ ಪತ್ತೆಯಾಗಿದೆ’ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.