<p><strong>ಬೀದರ್: </strong>ಯುಪಿಎಸ್ಸಿ ಪರೀಕ್ಷೆಯಲ್ಲಿ 511ನೇ ರ್ಯಾಂಕ್ ಗಳಿಸಿದ ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಖಮರುದ್ದಿನ್ ಖಾನ್ ಎಂ.ಡಿ. ಫೆರೋಜ್ಖಾನ್ ಅವರನ್ನು ಶಾಲೆಯಲ್ಲಿ ಗುರುವಾರ ಶಾಲು ಹೊದಿಸಿ ಸನ್ಮಾನಿಸಲಾಯಿತು.</p>.<p>ನಿರಂತರ ಪರಿಶ್ರಮ ವಹಿಸಿದರೆ ಅಂದುಕೊಂಡ ಗುರಿ ತಲುಪಲು ಸಾಧ್ಯವಿದೆ ಎನ್ನುವುದಕ್ಕೆ ಗುರುನಾನಕ ಶಾಲೆಯಲ್ಲಿ ಓದಿದ ಎಂ.ಡಿ. ಖಮರುದ್ದಿನ್ ಅವರೇ ಉತ್ತಮ ನಿದರ್ಶನವಾಗಿದ್ದಾರೆ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ನುಡಿದರು.</p>.<p>ನಾನು ಕೂಡ ಸಾಮಾನ್ಯ ವಿದ್ಯಾರ್ಥಿಗಳಂತೆ ಇದ್ದೆ. ಗುರುನಾನಕ ಶಾಲೆ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಅರಿವು ಮೂಡಿಸಿ, ಆತ್ಮವಿಶ್ವಾಸ ತುಂಬಿದ್ದರಿಂದಲೇ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಎಂ.ಡಿ. ಖಮರುದ್ದಿನ್ ಹೇಳಿದರು.</p>.<p>ಗುರುನಾನಕ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಅನುಭವಿ ಶಿಕ್ಷಕರು ಇದ್ದಾರೆ ಎಂದು ತಿಳಿಸಿದರು.<br />ಪವನಪ್ರಿಯಾ, ಮುಖ್ಯ ಶಿಕ್ಷಕರಾದ ಎನ್. ರಾಜು, ಅಮಜದ್ ಅಲಿ, ಶಿಕ್ಷಕರಾದ ಮನೋಹರ ಮುಳೆ, ಆನಂದ, ಆಶಾ ಉಪ್ಪಿನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಯುಪಿಎಸ್ಸಿ ಪರೀಕ್ಷೆಯಲ್ಲಿ 511ನೇ ರ್ಯಾಂಕ್ ಗಳಿಸಿದ ಇಲ್ಲಿಯ ಗುರುನಾನಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಖಮರುದ್ದಿನ್ ಖಾನ್ ಎಂ.ಡಿ. ಫೆರೋಜ್ಖಾನ್ ಅವರನ್ನು ಶಾಲೆಯಲ್ಲಿ ಗುರುವಾರ ಶಾಲು ಹೊದಿಸಿ ಸನ್ಮಾನಿಸಲಾಯಿತು.</p>.<p>ನಿರಂತರ ಪರಿಶ್ರಮ ವಹಿಸಿದರೆ ಅಂದುಕೊಂಡ ಗುರಿ ತಲುಪಲು ಸಾಧ್ಯವಿದೆ ಎನ್ನುವುದಕ್ಕೆ ಗುರುನಾನಕ ಶಾಲೆಯಲ್ಲಿ ಓದಿದ ಎಂ.ಡಿ. ಖಮರುದ್ದಿನ್ ಅವರೇ ಉತ್ತಮ ನಿದರ್ಶನವಾಗಿದ್ದಾರೆ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ನುಡಿದರು.</p>.<p>ನಾನು ಕೂಡ ಸಾಮಾನ್ಯ ವಿದ್ಯಾರ್ಥಿಗಳಂತೆ ಇದ್ದೆ. ಗುರುನಾನಕ ಶಾಲೆ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆ ಅರಿವು ಮೂಡಿಸಿ, ಆತ್ಮವಿಶ್ವಾಸ ತುಂಬಿದ್ದರಿಂದಲೇ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಎಂ.ಡಿ. ಖಮರುದ್ದಿನ್ ಹೇಳಿದರು.</p>.<p>ಗುರುನಾನಕ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಇದೆ. ಅನುಭವಿ ಶಿಕ್ಷಕರು ಇದ್ದಾರೆ ಎಂದು ತಿಳಿಸಿದರು.<br />ಪವನಪ್ರಿಯಾ, ಮುಖ್ಯ ಶಿಕ್ಷಕರಾದ ಎನ್. ರಾಜು, ಅಮಜದ್ ಅಲಿ, ಶಿಕ್ಷಕರಾದ ಮನೋಹರ ಮುಳೆ, ಆನಂದ, ಆಶಾ ಉಪ್ಪಿನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>