1914 ರಲ್ಲಿ ನಡೆದ ಮೈಸೂರು ಸಂಪದಭ್ಯುದಯ ಸಮಾಜ ಸಮ್ಮೇಳನದಲ್ಲಿ ಪರಿಷತ್ ಸ್ಥಾಪಿಸುವ ನಿರ್ಣಯ ಕೈಗೊಳ್ಳಲಾಯಿತು. ಅದಕ್ಕಾಗಿ ರಾವ್ ಬಹದ್ದೂರ್, ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ.ಎಸ್. ಅಚ್ಯುತರಾವ್ ಅವರನ್ನು ಒಳಗೊಂಡ ಉಪ ಸಮಿತಿ ರಚಿಸಲಾಯಿತು. 1915 ರಲ್ಲಿ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪಿಸಲಾಯಿತು. 1935 ರಲ್ಲಿ ಅದನ್ನು ಕನ್ನಡ ಸಾಹಿತ್ಯ ಪರಿಷತ್ ಎಂದು ಬದಲಿಸಲಾಯಿತು ಎಂದು ಹೇಳಿದರು.