ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಂತೋಷ ಯಡಹಳ್ಳಿ ಮಾತನಾಡಿದರು. ಡಾ. ಶ್ರೀನಿವಾಸ ಒಡೆಯರ್ ಅವರು ಸಸ್ಯ ಔಷಧಿಗಳ ಉಪಯೋಗ ಮತ್ತು ಅದರ ಮಹತ್ವ, ಡಾ. ರಾಮಕೃಷ್ಣ ಅವರು ರಸಶಾಸ್ತ್ರದಲ್ಲಿ ಇತ್ತೀಚಿನ ಹೊಸ ಅವಿಷ್ಕಾರಗಳು ಕುರಿತು ಉಪನ್ಯಾಸ ನೀಡಿದರು. 60 ಮಂದಿ ಪ್ರಾಧ್ಯಾಪಕರು ವಿವಿಧ ಪ್ರಬಂಧ ಮಂಡಿಸಿದರು.
ಚಿದಂಬರ ಶಿಕ್ಷಣ ಸಂಸ್ಥೆಯ ಡಾ. ಚನ್ನಬಸಪ್ಪ ಹಾಲಹಳ್ಳಿ, ಪ್ರಭುಶೆಟ್ಟಿ ಮುದ್ದಾ, ಬಿ.ಜಿ. ಶೆಟಕಾರ್, ಬಸವರಾಜ ಜಾಬಶೆಟ್ಟಿ, ಶಿವಶರಣಪ್ಪ ಸಾವಳಗಿ, ಉದಯಭಾನು ಹಲವಾಯಿ, ಮಡಿವಾಳಪ್ಪ ಗಂಗಶೆಟ್ಟಿ, ಶರಣಪ್ಪ ತಿರ್ಲಾಪುರೆ, ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ, ಕಾರ್ಯಕ್ರಮ ಸಂಯೋಜಕ ಡಾ. ಬಂಡೆಪ್ಪ, ಡಾ. ವಿಜಯಕುಮಾರ ಬಿರಾದಾರ, ಡಾ. ಧೂಳಪ್ಪ, ಡಾ. ಪ್ರವೀಣ ಸಿಂಪಿ ಇದ್ದರು.