‘ಬಸವತತ್ವ ಪಾಲನೆಯಿಂದ ಶಾಂತಿ’
ಉದ್ಘಾಟನೆ ನೆರವೇರಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ ‘ಬಸವಣ್ಣನವರ ತತ್ವಗಳ ಪಾಲನೆಯಾದರೆ ಎಲ್ಲೆಡೆ ಶಾಂತಿ ನೆಲೆಸಬಲ್ಲದು. ಸಮಬಾಳು ಮತ್ತು ಸಮಪಾಲು ಸಿದ್ಧಾಂತ ಅವರದ್ದಾಗಿದ್ದರಿಂದ ಎಲ್ಲರ ಕಲ್ಯಾಣ ನಿಶ್ಚಿತ. ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹಾಗೂ ತಾಯಿಯವರು ಮಾತೆ ಮಹಾದೇವಿಯವರ ಅಪ್ಪಟ ಶಿಷ್ಯರಾಗಿದ್ದರು. ಬಸವತತ್ವದ ಅನುಯಾಯಿ ಆಗಿದ್ದರು’ ಎಂದು ಹೇಳಿದರು.