ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಂಚಾಲಕ ಮುಜಾಹಿದಪಾಶಾ ಕುರೇಶಿ ಮಾತನಾಡಿ, ‘ಈ ಕಾನೂನು ಜಾರಿಯಾಗದಂತೆ ತಡೆಯಲು ನ್ಯಾಯಾಲಯದ ಮೊರೆ ಹೋಗಲಾಗುತ್ತದೆ. ಜಾನುವಾರು ಹತ್ಯೆ ಆರೋಪಿಗೆ ₹10 ಲಕ್ಷ ದಂಡ ವಿಧಿಸಿರುವುದೂ ನ್ಯಾಯಸಮ್ಮತಲ್ಲ. ಗೋಹತ್ಯೆ ನಿಷೇಧಿಸುವುದಕ್ಕೆ ಅಭ್ಯಂತರವಿಲ್ಲ. ಆದರೆ, ಎತ್ತು, ಎಮ್ಮೆಗಳ ಹತ್ಯೆ ತಡೆಯುವುದು ಸರಿಯಲ್ಲ’ ಎಂದು ಹೇಳಿದರು.