ಮಠ ಅವರ ಸ್ನೇಹಿತ ಚನ್ನಬಸವ ಹೇಡೆ ಅವರ ದತ್ತಿನಿಧಿಯಿಂದ ಪ್ರತಿ ವರ್ಷ ₹ 10 ಸಾವಿರ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ. ಇಲ್ಲಿಯವರೆಗೆ ಸಾಹಿತಿ ನವೋದಯ ವಿದ್ಯಾಲಯದ ಅಧ್ಯಾಪಕ ವಾಸುದೇವ ನಾಡಿಗ(2015), ಸಾಹಿತಿ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ.ವಿಕ್ರಮ ವಿಸಾಜಿ (2016), ಸಾಹಿತಿ ನಿಲಾವರ ಸುರೇಂದ್ರ ಅಡಿಗ(2017), ಚಿಂತಕಿ ಶಿವಗಂಗಾ ರುಮ್ಮಾ (2018) ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.