ಮಳೆಗಾಲ ಸಮೀಪಿಸಿದರೂ ಪಟ್ಟಣದ ಬಸ್ ನಿಲ್ದಾಣ, ಬೀದರ್ ಬೇಸ್ ಬಡಾವಣೆ ಪಕ್ಕದಲ್ಲಿರುವ ರಾಜ ಕಾಲುವೆ ಸ್ವಚ್ಛಗೊಳಿಸಿಲ್ಲ. ಸಾರ್ವಜನಿಕರು ವಿಪರೀತ ಸೊಳ್ಳೆ ಕಾಟ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನ ಕಳೆಯುತ್ತಿದ್ದು, ದುರವಸ್ಥೆ ಬಗ್ಗೆ ಅಧಿಕಾರಿಗಳನ್ನು ಶಪಿಸುತ್ತಿರುವ ಬಗ್ಗೆ ‘ಪ್ರಜಾವಾಣಿ’ಯ ಮೇ 28ರ ಸಂಚಿಕೆಯಲ್ಲಿ ‘ಮಳೆ ಆರಂಭ: ಸ್ವಚ್ಛಗೊಳ್ಳದ ರಾಜಕಾಲುವೆ’ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಲಾಗಿತ್ತು.