<p><strong>ಭಾಲ್ಕಿ: </strong>ತಾಲ್ಲೂಕಿನ ತೇಗಂಪೂರ ಗ್ರಾಮದ ಕೆರೆಯಲ್ಲಿನ ತೆರೆದ ಬಾವಿಗೆ ಮಂಗಳವಾರ ಪಂಚಾಯತ್ ರಾಜ್ ಇಲಾಖೆ ಎಇಇ ಅಶೋಕ ಕಾಳಗಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿ, ಪೂಜೆ ಸಲ್ಲಿಸಿದರು.</p>.<p>ತೇಗಂಪೂರ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವ ಕುರಿತು ‘ಪ್ರಜಾವಾಣಿ’ಯ ಮೇ 11ರ ಮಂಗಳವಾರದ ಸಂಚಿಕೆಯಲ್ಲಿ ‘ಕುಡಿಯಲು ಯೋಗ್ಯವಲ್ಲದ ಕೆರೆಯ ಬಾವಿ ನೀರು’ ಶೀರ್ಷಿಕೆ ಅಡಿಯಲ್ಲಿ ಸಮಸ್ಯೆಯ ವಿವರವಾದ ವರದಿ ಪ್ರಕಟಿಸಿತ್ತು.</p>.<p>ವರದಿಗೆ ಸ್ಪಂದಿಸಿದ ಅಧಿಕಾರಗಳು ಗ್ರಾಮಕ್ಕೆ ದೌಡಾಯಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುವ ಭರವಸೆ ನೀಡಿದ್ದಾರೆ ಎಂದು ಗ್ರಾಮದ ಪ್ರಮುಖ ಶಿವಕುಮಾರ ತೇಗಂಪೂರ ತಿಳಿಸಿದ್ದಾರೆ.</p>.<p>ಅಧಿಕಾರಿಗಳಾದ ಸಂತೋಷ, ಯುವರಾಜ, ಪಿಡಿಒ ಯೇಸ್ತಾರಾಣಿ, ಮಹೇಶ ಪಾಟೀಲ, ನವನಾಥ ಪಾಟೀಲ, ರಮೇಶ ಬೆಲ್ದಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ: </strong>ತಾಲ್ಲೂಕಿನ ತೇಗಂಪೂರ ಗ್ರಾಮದ ಕೆರೆಯಲ್ಲಿನ ತೆರೆದ ಬಾವಿಗೆ ಮಂಗಳವಾರ ಪಂಚಾಯತ್ ರಾಜ್ ಇಲಾಖೆ ಎಇಇ ಅಶೋಕ ಕಾಳಗಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿ, ಪೂಜೆ ಸಲ್ಲಿಸಿದರು.</p>.<p>ತೇಗಂಪೂರ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವ ಕುರಿತು ‘ಪ್ರಜಾವಾಣಿ’ಯ ಮೇ 11ರ ಮಂಗಳವಾರದ ಸಂಚಿಕೆಯಲ್ಲಿ ‘ಕುಡಿಯಲು ಯೋಗ್ಯವಲ್ಲದ ಕೆರೆಯ ಬಾವಿ ನೀರು’ ಶೀರ್ಷಿಕೆ ಅಡಿಯಲ್ಲಿ ಸಮಸ್ಯೆಯ ವಿವರವಾದ ವರದಿ ಪ್ರಕಟಿಸಿತ್ತು.</p>.<p>ವರದಿಗೆ ಸ್ಪಂದಿಸಿದ ಅಧಿಕಾರಗಳು ಗ್ರಾಮಕ್ಕೆ ದೌಡಾಯಿಸಿ ಶೀಘ್ರದಲ್ಲಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುವ ಭರವಸೆ ನೀಡಿದ್ದಾರೆ ಎಂದು ಗ್ರಾಮದ ಪ್ರಮುಖ ಶಿವಕುಮಾರ ತೇಗಂಪೂರ ತಿಳಿಸಿದ್ದಾರೆ.</p>.<p>ಅಧಿಕಾರಿಗಳಾದ ಸಂತೋಷ, ಯುವರಾಜ, ಪಿಡಿಒ ಯೇಸ್ತಾರಾಣಿ, ಮಹೇಶ ಪಾಟೀಲ, ನವನಾಥ ಪಾಟೀಲ, ರಮೇಶ ಬೆಲ್ದಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>