<p><strong>ಬೀದರ್:</strong> ಎರಡು ವಾರಗಳಿಂದ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯದ್ದೇ ಚರ್ಚೆ ನಡೆಯುತ್ತಿದೆ. ಬೆಂಗಳೂರಲ್ಲಿ ಈರುಳ್ಳಿ ಬೆಲೆ ₹ 200 ಗೆ ಏರುತ್ತಿದ್ದಂತೆಯೇ ಇಲ್ಲಿಯ ವ್ಯಾಪಾರಸ್ಥರು ಸಹ ಬೆಲೆ ಪ್ರತಿ ಕೆ.ಜಿಗೆ ₹ 120ಕ್ಕೆ ಹೆಚ್ಚಳ ಮಾಡಿದ್ದಾರೆ. ಗುರುವಾರ ₹90 ಗೆ ಮಾರಾಟವಾಗಿದ್ದ ಈರುಳ್ಳಿ ಶುಕ್ರವಾರ ಬೆಳಗಾಗುವುದರಲ್ಲಿ ಮತ್ತೆ ₹30 ಏರಿಕೆ ಕಂಡಿದೆ.</p>.<p>ಗ್ರಾಹಕರು ಈರುಳ್ಳಿಗೆ ಪರ್ಯಾಯವಾಗಿ ಬೆಳ್ಳುಳ್ಳಿಯನ್ನೂ ಖರೀದಿಸುವ ಸ್ಥಿತಿಯಲ್ಲಿ ಇಲ್ಲ. ಕಾರಣ ಬೆಳ್ಳುಳ್ಳಿ ಬೆಲೆಯೂ ಪ್ರತಿ ಕೆ.ಜಿಗೆ ₹ 180 ತಲುಪಿದೆ. ನಗರದ ಬಹುತೇಕ ಹೋಟೆಲ್ಗಳಲ್ಲಿ ಪ್ಯಾಜ್ ಪಕೋಡಾ ಹಾಗೂ ಈರುಳ್ಳಿ ಭಜಿ ಮಾಡುವುದನ್ನೇ ನಿಲ್ಲಿಸಲಾಗಿದೆ. ಮಾಂಸಾಹಾರಿ ಹೋಟೆಲ್ಗಳಲ್ಲಿ ಮಾಲೀಕರು ಗ್ರಾಹಕರಿಗೆ ಈರುಳ್ಳಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಹೋಟೆಲ್ಗಳು ಈರುಳ್ಳಿಗೆ ಪರ್ಯಾಯವಾಗಿ ಎಲೆಕೋಸು ಕೊಟ್ಟು ಗ್ರಾಹಕರನ್ನು ಸಮಾಧಾನ ಪಡಿಸುತ್ತಿವೆ.</p>.<p>ಮಹಾರಾಷ್ಟ್ರದ ಸೋಲಾಪುರದ ಜಿಲ್ಲೆಯಲ್ಲಿ ರೈತರು ಬೆಳೆಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಎರಡು ವಾರಗಳ ಹಿಂದೆಯೇ ಜಿಲ್ಲೆಯ ವ್ಯಾಪಾರಿಗಳು ಪ್ರತಿ ಕ್ವಿಂಟಲ್ಗೆ ₹ 500 ರಿಂದ ₹ 600ಗೆ ಖರೀದಿಸಿದ್ದಾರೆ. ಬೆಲೆ ಏರಿಕೆಯಾದ ನಂತರ ಅದರ ಪೂರ್ಣ ಲಾಭ ಪಡೆದುಕೊಳ್ಳುತ್ತಿದ್ದಾರೆ. ರೈತರಿಗೆ ಬೆಲೆ ಏರಿಕೆಯ ಲಾಭ ದೊರಕಿಲ್ಲ. ಆದರೆ, ಸಗಟು ವ್ಯಾಪಾರಸ್ಥರು ಖುಷಿಯಲ್ಲಿದ್ದಾರೆ.</p>.<p>ನುಗ್ಗೆಕಾಯಿ ಬೆಲೆ ಪ್ರತಿ ಕೆ.ಜಿಗೆ ₹ 800 ಮುಂದುವರಿದಿದೆ. ಮದುವೆ, ಮುಂಜಿವೆಗಳು ಇರುವವರು ಮಾತ್ರ ನುಗ್ಗೆಕಾಯಿ ಕೊಂಡುಕೊಳ್ಳುತ್ತಿದ್ದಾರೆ. ಗೃಹಿಣಿಯರು ನುಗ್ಗೆಕಾಯಿ ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 500 ಹೆಚ್ಚಳವಾಗಿದೆ. ಆಲೂಗಡ್ಡೆ, ಬೀನ್ಸ್, ತೊಂಡೆಕಾಯಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.</p>.<p>ಪ್ರತಿ ಕ್ವಿಂಟಲ್ಗೆ ಹೂಕೋಸು, ಮೆಂತೆಸೊಪ್ಪು ಬೆಲೆ ₹ 300, ಹಿರೇಕಾಯಿ, ಗಜ್ಜರಿ, ಕೊತಂಬರಿ ₹ 200, ಎಲೆಕೋಸು, ಪಾಲಕ್ ₹150, ಬದನೆಕಾಯಿ, ಸಬ್ಬಸಗಿ, ಬೀಟ್ರೂಟ್ ಹಾಗೂ ಟೊಮೆಟೊ ಬೆಲೆ ₹100 ಕಡಿಮೆಯಾಗಿದೆ.</p>.<p>‘ಹೈದರಾಬಾದ್ನಿಂದ ಮೆಣಸಿನಕಾಯಿ, ಬೀನ್ಸ್, ಬೀಟ್ರೂಟ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಹಾಗೂ ಟೊಮೆಟೊ ಬಂದಿವೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಉತ್ತರ ಪ್ರದೇಶದ ಆಗ್ರಾದಿಂದ ಆಲೂಗಡ್ಡೆ ಬಂದಿದೆ’ ಎಂದು ಗಾಂಧಿಗಂಜ್ನ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದ್ದಾರೆ.<br /><br /><strong>ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ<br />ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ</strong><br />ಈರುಳ್ಳಿ 80-90, 100-120<br />ಬೆಳ್ಳುಳ್ಳಿ 180-200, 160-180<br />ನುಗ್ಗೆಕಾಯಿ 700-800, 700-800<br />ಮೆಣಸಿನಕಾಯಿ 15-20, 20-25<br />ಆಲೂಗಡ್ಡೆ 20-25, 20-25<br />ಬದನೆಕಾಯಿ 50-60, 40-50<br />ಎಲೆಕೋಸು 30-40, 20-25<br />ಗಜ್ಜರಿ 60-80, 50-60<br />ಬೀನ್ಸ್ 35-40, 35-40<br />ಮೆಂತೆ ಸೊಪ್ಪು 50-60, 25-30<br />ಹೂಕೋಸು 70-80, 40-50<br />ಸಬ್ಬಸಗಿ 40-50, 30-40<br />ಬೀಟ್ರೂಟ್ 50-60, 40-50<br />ತೊಂಡೆಕಾಯಿ 30-40, 30-40<br />ಕರಿಬೇವು 30-40, 30-40<br />ಕೊತಂಬರಿ 50-60, 30-40<br />ಟೊಮೆಟೊ 25-30, 15-20<br />ಪಾಲಕ್ 30-40, 20-25<br />ಬೆಂಡೆಕಾಯಿ 35-40, 35-40<br />ಹಿರೇಕಾಯಿ 70-80, 50-60</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಎರಡು ವಾರಗಳಿಂದ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆಯದ್ದೇ ಚರ್ಚೆ ನಡೆಯುತ್ತಿದೆ. ಬೆಂಗಳೂರಲ್ಲಿ ಈರುಳ್ಳಿ ಬೆಲೆ ₹ 200 ಗೆ ಏರುತ್ತಿದ್ದಂತೆಯೇ ಇಲ್ಲಿಯ ವ್ಯಾಪಾರಸ್ಥರು ಸಹ ಬೆಲೆ ಪ್ರತಿ ಕೆ.ಜಿಗೆ ₹ 120ಕ್ಕೆ ಹೆಚ್ಚಳ ಮಾಡಿದ್ದಾರೆ. ಗುರುವಾರ ₹90 ಗೆ ಮಾರಾಟವಾಗಿದ್ದ ಈರುಳ್ಳಿ ಶುಕ್ರವಾರ ಬೆಳಗಾಗುವುದರಲ್ಲಿ ಮತ್ತೆ ₹30 ಏರಿಕೆ ಕಂಡಿದೆ.</p>.<p>ಗ್ರಾಹಕರು ಈರುಳ್ಳಿಗೆ ಪರ್ಯಾಯವಾಗಿ ಬೆಳ್ಳುಳ್ಳಿಯನ್ನೂ ಖರೀದಿಸುವ ಸ್ಥಿತಿಯಲ್ಲಿ ಇಲ್ಲ. ಕಾರಣ ಬೆಳ್ಳುಳ್ಳಿ ಬೆಲೆಯೂ ಪ್ರತಿ ಕೆ.ಜಿಗೆ ₹ 180 ತಲುಪಿದೆ. ನಗರದ ಬಹುತೇಕ ಹೋಟೆಲ್ಗಳಲ್ಲಿ ಪ್ಯಾಜ್ ಪಕೋಡಾ ಹಾಗೂ ಈರುಳ್ಳಿ ಭಜಿ ಮಾಡುವುದನ್ನೇ ನಿಲ್ಲಿಸಲಾಗಿದೆ. ಮಾಂಸಾಹಾರಿ ಹೋಟೆಲ್ಗಳಲ್ಲಿ ಮಾಲೀಕರು ಗ್ರಾಹಕರಿಗೆ ಈರುಳ್ಳಿ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲ ಹೋಟೆಲ್ಗಳು ಈರುಳ್ಳಿಗೆ ಪರ್ಯಾಯವಾಗಿ ಎಲೆಕೋಸು ಕೊಟ್ಟು ಗ್ರಾಹಕರನ್ನು ಸಮಾಧಾನ ಪಡಿಸುತ್ತಿವೆ.</p>.<p>ಮಹಾರಾಷ್ಟ್ರದ ಸೋಲಾಪುರದ ಜಿಲ್ಲೆಯಲ್ಲಿ ರೈತರು ಬೆಳೆಸಿದ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಎರಡು ವಾರಗಳ ಹಿಂದೆಯೇ ಜಿಲ್ಲೆಯ ವ್ಯಾಪಾರಿಗಳು ಪ್ರತಿ ಕ್ವಿಂಟಲ್ಗೆ ₹ 500 ರಿಂದ ₹ 600ಗೆ ಖರೀದಿಸಿದ್ದಾರೆ. ಬೆಲೆ ಏರಿಕೆಯಾದ ನಂತರ ಅದರ ಪೂರ್ಣ ಲಾಭ ಪಡೆದುಕೊಳ್ಳುತ್ತಿದ್ದಾರೆ. ರೈತರಿಗೆ ಬೆಲೆ ಏರಿಕೆಯ ಲಾಭ ದೊರಕಿಲ್ಲ. ಆದರೆ, ಸಗಟು ವ್ಯಾಪಾರಸ್ಥರು ಖುಷಿಯಲ್ಲಿದ್ದಾರೆ.</p>.<p>ನುಗ್ಗೆಕಾಯಿ ಬೆಲೆ ಪ್ರತಿ ಕೆ.ಜಿಗೆ ₹ 800 ಮುಂದುವರಿದಿದೆ. ಮದುವೆ, ಮುಂಜಿವೆಗಳು ಇರುವವರು ಮಾತ್ರ ನುಗ್ಗೆಕಾಯಿ ಕೊಂಡುಕೊಳ್ಳುತ್ತಿದ್ದಾರೆ. ಗೃಹಿಣಿಯರು ನುಗ್ಗೆಕಾಯಿ ಖರೀದಿಸಲು ಆಸಕ್ತಿ ತೋರಿಸುತ್ತಿಲ್ಲ. ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 500 ಹೆಚ್ಚಳವಾಗಿದೆ. ಆಲೂಗಡ್ಡೆ, ಬೀನ್ಸ್, ತೊಂಡೆಕಾಯಿ ಹಾಗೂ ಕರಿಬೇವು ಬೆಲೆ ಸ್ಥಿರವಾಗಿದೆ.</p>.<p>ಪ್ರತಿ ಕ್ವಿಂಟಲ್ಗೆ ಹೂಕೋಸು, ಮೆಂತೆಸೊಪ್ಪು ಬೆಲೆ ₹ 300, ಹಿರೇಕಾಯಿ, ಗಜ್ಜರಿ, ಕೊತಂಬರಿ ₹ 200, ಎಲೆಕೋಸು, ಪಾಲಕ್ ₹150, ಬದನೆಕಾಯಿ, ಸಬ್ಬಸಗಿ, ಬೀಟ್ರೂಟ್ ಹಾಗೂ ಟೊಮೆಟೊ ಬೆಲೆ ₹100 ಕಡಿಮೆಯಾಗಿದೆ.</p>.<p>‘ಹೈದರಾಬಾದ್ನಿಂದ ಮೆಣಸಿನಕಾಯಿ, ಬೀನ್ಸ್, ಬೀಟ್ರೂಟ್, ಗಜ್ಜರಿ, ಎಲೆಕೋಸು, ಹೂಕೋಸು, ತೊಂಡೆಕಾಯಿ ಹಾಗೂ ಟೊಮೆಟೊ ಬಂದಿವೆ. ಮಹಾರಾಷ್ಟ್ರದ ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಉತ್ತರ ಪ್ರದೇಶದ ಆಗ್ರಾದಿಂದ ಆಲೂಗಡ್ಡೆ ಬಂದಿದೆ’ ಎಂದು ಗಾಂಧಿಗಂಜ್ನ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದ್ದಾರೆ.<br /><br /><strong>ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ<br />ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ</strong><br />ಈರುಳ್ಳಿ 80-90, 100-120<br />ಬೆಳ್ಳುಳ್ಳಿ 180-200, 160-180<br />ನುಗ್ಗೆಕಾಯಿ 700-800, 700-800<br />ಮೆಣಸಿನಕಾಯಿ 15-20, 20-25<br />ಆಲೂಗಡ್ಡೆ 20-25, 20-25<br />ಬದನೆಕಾಯಿ 50-60, 40-50<br />ಎಲೆಕೋಸು 30-40, 20-25<br />ಗಜ್ಜರಿ 60-80, 50-60<br />ಬೀನ್ಸ್ 35-40, 35-40<br />ಮೆಂತೆ ಸೊಪ್ಪು 50-60, 25-30<br />ಹೂಕೋಸು 70-80, 40-50<br />ಸಬ್ಬಸಗಿ 40-50, 30-40<br />ಬೀಟ್ರೂಟ್ 50-60, 40-50<br />ತೊಂಡೆಕಾಯಿ 30-40, 30-40<br />ಕರಿಬೇವು 30-40, 30-40<br />ಕೊತಂಬರಿ 50-60, 30-40<br />ಟೊಮೆಟೊ 25-30, 15-20<br />ಪಾಲಕ್ 30-40, 20-25<br />ಬೆಂಡೆಕಾಯಿ 35-40, 35-40<br />ಹಿರೇಕಾಯಿ 70-80, 50-60</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>