<p><strong>ಬೀದರ್: </strong>ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.</p>.<p>ಕಳೆದ ವಾರ ಈರುಳ್ಳಿ ಬೆಲೆ ಹಲವು ವರ್ಷಗಳಲ್ಲೇ ಗರಿಷ್ಠ ಅಂದರೆ ಕೆ.ಜಿಗೆ ₹120ಕ್ಕೆ ತಲುಪಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಈಗ ₹70ಕ್ಕೆ ಇಳಿದಿದೆ. ಬೇರೆ ಬೇರೆ ರಾಜ್ಯಗಳಿಂದ ಈರುಳ್ಳಿ ಬಂದಿರುವ ಕಾರಣ ಬೆಲೆ ಸ್ವಲ್ಪ ತಗ್ಗಿದೆ.</p>.<p>ಈರುಳ್ಳಿ ಬೆಲೆ ಗಗನಕ್ಕೇರಿದಾಗ ಕೆಲ ಮಾಂಸಾಹಾರಿ ಹೋಟೆಲ್, ಮಿರ್ಚಿ ಭಜಿ ಅಂಗಡಿಯವರು ಗ್ರಾಹಕರಿಗೆ ಈರುಳ್ಳಿ ಕೊಡುವುದನ್ನೇ ನಿಲ್ಲಿಸಿದ್ದರು. ಒಂದೊಮ್ಮೆ ಗ್ರಾಹಕರು ಬೇಡಿಕೆ ಇಟ್ಟರೆ ₹10 ಹೆಚ್ಚುವರಿಯಾಗಿ ಪಡೆದು ಕೊಟ್ಟಿದ್ದರು. ಪಾನಿಪುರಿ ಅಂಗಡಿಗಳಲ್ಲಿ ಪಾನಿಪುರಿ ಜತೆಗೆ ಈರುಳ್ಳಿ ಬದಲು ಎಲೆಕೋಸು ಕೊಟ್ಟಿದ್ದರು. ಇದೀಗ ಬೆಲೆ ಕಡಿಮೆಯಾದ ಕಾರಣ, ನಿಧಾನವಾಗಿ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಾರಂಭಿಸಿದೆ.</p>.<p>ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದ್ದರೂ, ಸಗಟು ವ್ಯಾಪಾರಿಗಳೇ ಅದರ ಪೂರ್ಣ ಲಾಭ ಪಡೆದುಕೊಳ್ಳತ್ತಿದ್ದಾರೆ. ರೈತರಿಗೆ ಲಾಭ ದೊರಕುತ್ತಿಲ್ಲ. ರೈತರು ಮಾರಾಟಕ್ಕೆ ತಂದ ಈರುಳ್ಳಿ ಇನ್ನೂ ಒಣಗಿಲ್ಲ. ಹಸಿ ಇದೆ ಎಂದು ಹೇಳಿ ಮಧ್ಯವರ್ತಿಗಳು ಬೆಲೆ ಇಳಿಸುತ್ತಿದ್ದಾರೆ.</p>.<p>ಬೇರೆಡೆಗೆ ಸಾಗಿಸಲು ಆಗದ ರೈತರು ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ, ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮೂಲಕ ಈರುಳ್ಳಿ ಖರೀದಿಸಬೇಕು ಎಂದು ಗ್ರಾಹಕ ಓಂಕಾರ ಪಾಟೀಲ ಒತ್ತಾಯಿಸಿದರು.</p>.<p>ಸೋಲ್ಲಾಪುರದಿಂದ ಬಂದಿರುವ ಬೆಳ್ಳುಳ್ಳಿ ಬೆಲೆ ಈ ವಾರವೂ ಕಳೆದ ವಾರದಷ್ಟೇ ಅಂದರೆ ಪ್ರತಿ ಕೆ.ಜಿ.ಗೆ ₹180 ಇದೆ. ನುಗ್ಗೆಕಾಯಿ ಬೆಲೆ ಪ್ರತಿ ಕೆ.ಜಿಗೆ ₹700 ಆಗಿದೆ. ಗ್ರಾಹಕರು ಖರೀದಿಸಲಿಕ್ಕಿಲ್ಲ ಎನ್ನುವ ಲೆಕ್ಕಾಚಾರದಲ್ಲಿ ಯಾವ ಅಂಗಡಿಯವರೂ ನುಗ್ಗೆಕಾಯಿ ಮಾರಾಟಕ್ಕೆ ಇಟ್ಟಿಲ್ಲ.</p>.<p>ಹೈದರಾಬಾದ್ನಿಂದ ಆವಕ ಆಗಿರುವ ಮೆಣಸಿನಕಾಯಿ ಬೆಲೆ ಪ್ರತಿ ಕೆ.ಜಿ.ಗೆ ₹25, ಗಜ್ಜರಿ ₹60, ಬೀನ್ಸ್ ₹50, ಎಲೆಕೋಸು ₹25, ಹೂಕೋಸು ₹50 ಹಾಗೂ ಟೊಮೆಟೊ ಬೆಲೆ ₹ 20 ಇದೆ.</p>.<p>ಆಲೂಗಡ್ಡೆ ಆಗ್ರಾದಿಂದ ಬಂದಿದ್ದು, ಬೆಲೆ ಸ್ಥಿರವಾಗಿದೆ. ಪ್ರತಿ ಕೆ.ಜಿ.ಗೆ ₹20 ರಂತೆ ಮಾರಾಟವಾಗುತ್ತಿದೆ ಎಂದು ಗಾಂಧಿಗಂಜ್ನ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿದ್ದು, ಗ್ರಾಹಕರು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.</p>.<p>ಕಳೆದ ವಾರ ಈರುಳ್ಳಿ ಬೆಲೆ ಹಲವು ವರ್ಷಗಳಲ್ಲೇ ಗರಿಷ್ಠ ಅಂದರೆ ಕೆ.ಜಿಗೆ ₹120ಕ್ಕೆ ತಲುಪಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಈಗ ₹70ಕ್ಕೆ ಇಳಿದಿದೆ. ಬೇರೆ ಬೇರೆ ರಾಜ್ಯಗಳಿಂದ ಈರುಳ್ಳಿ ಬಂದಿರುವ ಕಾರಣ ಬೆಲೆ ಸ್ವಲ್ಪ ತಗ್ಗಿದೆ.</p>.<p>ಈರುಳ್ಳಿ ಬೆಲೆ ಗಗನಕ್ಕೇರಿದಾಗ ಕೆಲ ಮಾಂಸಾಹಾರಿ ಹೋಟೆಲ್, ಮಿರ್ಚಿ ಭಜಿ ಅಂಗಡಿಯವರು ಗ್ರಾಹಕರಿಗೆ ಈರುಳ್ಳಿ ಕೊಡುವುದನ್ನೇ ನಿಲ್ಲಿಸಿದ್ದರು. ಒಂದೊಮ್ಮೆ ಗ್ರಾಹಕರು ಬೇಡಿಕೆ ಇಟ್ಟರೆ ₹10 ಹೆಚ್ಚುವರಿಯಾಗಿ ಪಡೆದು ಕೊಟ್ಟಿದ್ದರು. ಪಾನಿಪುರಿ ಅಂಗಡಿಗಳಲ್ಲಿ ಪಾನಿಪುರಿ ಜತೆಗೆ ಈರುಳ್ಳಿ ಬದಲು ಎಲೆಕೋಸು ಕೊಟ್ಟಿದ್ದರು. ಇದೀಗ ಬೆಲೆ ಕಡಿಮೆಯಾದ ಕಾರಣ, ನಿಧಾನವಾಗಿ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಾರಂಭಿಸಿದೆ.</p>.<p>ರಾಜ್ಯದ ಎಲ್ಲ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಹೆಚ್ಚಳವಾಗಿದ್ದರೂ, ಸಗಟು ವ್ಯಾಪಾರಿಗಳೇ ಅದರ ಪೂರ್ಣ ಲಾಭ ಪಡೆದುಕೊಳ್ಳತ್ತಿದ್ದಾರೆ. ರೈತರಿಗೆ ಲಾಭ ದೊರಕುತ್ತಿಲ್ಲ. ರೈತರು ಮಾರಾಟಕ್ಕೆ ತಂದ ಈರುಳ್ಳಿ ಇನ್ನೂ ಒಣಗಿಲ್ಲ. ಹಸಿ ಇದೆ ಎಂದು ಹೇಳಿ ಮಧ್ಯವರ್ತಿಗಳು ಬೆಲೆ ಇಳಿಸುತ್ತಿದ್ದಾರೆ.</p>.<p>ಬೇರೆಡೆಗೆ ಸಾಗಿಸಲು ಆಗದ ರೈತರು ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ, ನೇರವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮೂಲಕ ಈರುಳ್ಳಿ ಖರೀದಿಸಬೇಕು ಎಂದು ಗ್ರಾಹಕ ಓಂಕಾರ ಪಾಟೀಲ ಒತ್ತಾಯಿಸಿದರು.</p>.<p>ಸೋಲ್ಲಾಪುರದಿಂದ ಬಂದಿರುವ ಬೆಳ್ಳುಳ್ಳಿ ಬೆಲೆ ಈ ವಾರವೂ ಕಳೆದ ವಾರದಷ್ಟೇ ಅಂದರೆ ಪ್ರತಿ ಕೆ.ಜಿ.ಗೆ ₹180 ಇದೆ. ನುಗ್ಗೆಕಾಯಿ ಬೆಲೆ ಪ್ರತಿ ಕೆ.ಜಿಗೆ ₹700 ಆಗಿದೆ. ಗ್ರಾಹಕರು ಖರೀದಿಸಲಿಕ್ಕಿಲ್ಲ ಎನ್ನುವ ಲೆಕ್ಕಾಚಾರದಲ್ಲಿ ಯಾವ ಅಂಗಡಿಯವರೂ ನುಗ್ಗೆಕಾಯಿ ಮಾರಾಟಕ್ಕೆ ಇಟ್ಟಿಲ್ಲ.</p>.<p>ಹೈದರಾಬಾದ್ನಿಂದ ಆವಕ ಆಗಿರುವ ಮೆಣಸಿನಕಾಯಿ ಬೆಲೆ ಪ್ರತಿ ಕೆ.ಜಿ.ಗೆ ₹25, ಗಜ್ಜರಿ ₹60, ಬೀನ್ಸ್ ₹50, ಎಲೆಕೋಸು ₹25, ಹೂಕೋಸು ₹50 ಹಾಗೂ ಟೊಮೆಟೊ ಬೆಲೆ ₹ 20 ಇದೆ.</p>.<p>ಆಲೂಗಡ್ಡೆ ಆಗ್ರಾದಿಂದ ಬಂದಿದ್ದು, ಬೆಲೆ ಸ್ಥಿರವಾಗಿದೆ. ಪ್ರತಿ ಕೆ.ಜಿ.ಗೆ ₹20 ರಂತೆ ಮಾರಾಟವಾಗುತ್ತಿದೆ ಎಂದು ಗಾಂಧಿಗಂಜ್ನ ತರಕಾರಿ ಸಗಟು ವ್ಯಾಪಾರಿ ವಿಜಯಕುಮಾರ ಕಡ್ಡೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>