ಜನವಾಡ: ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಶ್ರಮಿಸಬೇಕು ಎಂದು ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ತಾಲ್ಲೂಕಿನ ಚಿಟ್ಟಾ ಗ್ರಾಮದ ಬೂತ್ ಸಂಖ್ಯೆ 61 ರ ಅಧ್ಯಕ್ಷ ಶಿವಕುಮಾರ ಮಾಮಡಗಿ ಅವರ ಮನೆಯಲ್ಲಿ ನಡೆದ ಪಂಡಿತ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತಗಟ್ಟೆ ಮಟ್ಟದಲ್ಲಿ ನಿರಂತರ ವಿವಿಧ ಚಟುವಟಿಕೆಗಳನ್ನು ನಡೆಸಬೇಕು ಎಂದು ಸಲಹೆ ಮಾಡಿದರು.
ಮತಗಟ್ಟೆ ಅಧ್ಯಕ್ಷರ ಮನೆ ಗೋಡೆ ಮೇಲೆ ನಾಮಫಲಕ ಅಳವಡಿಸಬೇಕು. ಕಾರ್ಯಕರ್ತರ ಮನೆ ಮೇಲೆ ಪಕ್ಷದ ಧ್ವಜ ಹಾರಿಸಬೇಕು ಎಂದು ತಿಳಿಸಿದರು.
ಬೀದರ್ ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಮುಖಂಡರಾದ ರಾಜು ಮಾಮಡಗಿ, ಮಲ್ಲಿಕಾರ್ಜುನ, ಶಿವಾಜಿರಾವ್ ಪಾಟೀಲ ಇದ್ದರು.