ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ: ಮಲ್ಲಿಕಾರ್ಜುನ ದೇವರ ರಥೋತ್ಸವ

Last Updated 18 ಮೇ 2022, 4:35 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎರಡು ದಿನ ಸಂಭ್ರಮದಿಂದ ನಡೆದ ಜಾತ್ರೆ ಸೋಮವಾರ ರಥೋತ್ಸವದೊಂದಿಗೆ ಸಮಾಪ್ತಿಗೊಂಡಿತು.

ವಿಶೇಷ ಪೂಜೆ, ಅಭಿಷೇಕ ನಡೆಸಿ ಜಾತ್ರೆಗೆ ಚಾಲನೆ ನೀಡಲಾಯಿತು.

ಭಕ್ತರು ನೈವೇದ್ಯ, ತೆಂಗಿನ ಕಾಯಿ ಅರ್ಪಿಸಿದರು. ವಾದ್ಯಮೇಳ ಹಾಗೂ ಬ್ಯಾಂಡ್ ಬಾಜಾದೊಂದಿಗೆ ಪಲ್ಲಕ್ಕಿ ಮತ್ತು ನಂದಿಧ್ವಜಗಳ ಮೆರವಣಿಗೆ ಹಾಗೂ ಮಧ್ಯರಾತ್ರಿ ರಥೋತ್ಸವ ನಡೆಯಿತು.

ಶಾಸಕ ಶರಣು ಸಲಗರ ನಂದಿಧ್ವಜ ಮೆರವಣಿಗೆಗೆ ಚಾಲನೆ ನೀಡಿದರು.

ತಹಶೀಲ್ದಾರ್ ಸಾವಿತ್ರಿ ಸಲಗರ, ಮುಖಂಡರಾದ ಶಶಿಕಾಂತ ದುರ್ಗೆ, ಸಿದ್ದು ಶೇರಿಕಾರ್, ಗುರು ದುರ್ಗೆ, ಮಲ್ಲಿಕಾರ್ಜುನ ಆಗ್ರೆ, ಬಾಬು ಚಪಾತೆ, ಸುನಿಲ, ಚನ್ನಬಸಪ್ಪ ರಾಜಾಪುರೆ, ಸೂರ್ಯಕಾಂತ ನಾಸೆ, ನಾಗೇಶ್, ಸಂತೋಷ, ಸಂಗಮೇಶ ಔಸೆ, ಶ್ರೀಶೈಲ್, ಶಿವಶಂಕರ, ಉಮೇಶ, ಸಂತೋಷ ದುರ್ಗೆ, ಮಂಜು, ನಾಗನಾಥ ಸಂಗೋಳಗೆ, ಸಚಿನ, ವೀರಭದ್ರ ಹಾಗೂ ವಿಜಪ್ಪ ಕಿರುಣಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT